ಕಾಸರಗೋಡು: ಕೇರಳ ವಿಧಾನಸಭೆಯ ಅನಿವಾಸಿ ಮಲಯಾಳಿಗಳ ಕಲ್ಯಾಣ ಸಮಿತಿಯು ಸೆ.30ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ಆಯೋಜಿಸಿದೆ. ಸಮಿತಿಯು ಅನಿವಾಸಿ ಮಲಯಾಳಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅನಿವಾಸಿ ಮಲಯಾಳಿ ಸಂಘಟನೆಗಳ ಪ್ರತಿನಿಧಿಗಳು, ವ್ಯಕ್ತಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಚರ್ಚೆ ನಡೆಸುವುದರೊಂದಿಗೆ ದೂರು ಸ್ವೀಕರಿಸಲಿದೆ.
ಈ ಸಂದರ್ಭ ಕೇರಳದ ಅನಿವಾಸಿ ವ್ಯವಹಾರಗಳ ಇಲಾಖೆ, ಕೇರಳ ಪ್ರವಾಸಿ ಕಲ್ಯಾಣ ಮಂಡಳಿ ಮತ್ತು ನೋರ್ಕಾ ರೂಟ್ಸ್ನಿಂದ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಲಾಗುವುದು. ವಲಸಿಗ ಮಲಯಾಳಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವ್ಯಕ್ತಿಗಳು ಈ ಸಭೆಯಲ್ಲಿ ಭಾಗವಹಿಸಿ ದೂರುಗಳನ್ನು ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.