ಕಾಸರಗೋಡು: ವಿಶ್ವ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ವತಿಯಿಂದ ಕಾಞಂಗಾಡು ಪುಂಜಾವಿ ಬೀಚ್ ಸ್ವಚ್ಛಗೊಳಿಸುವ ಕಾರ್ಯಕ್ರಮ ಜರುಗಿತು. ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳೊಂದಿಗೆ ಸ್ಥಳೀಯರು ಹಾಗೂ ಸ್ವಯಂಸೇವಕರು ಕೈಜೋಡಿಸುವ ಮೂಲಕ ಏಳು ಕ್ವಿಂಟಾಲ್ಗೂ ಅಧಿಕ ಕಸ ಕರಾವಳಿಯಿಂದ ಸಂಗ್ರಹಿಸಲಾಯಿತು. ಕೇಂದ್ರೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೀಜನೆ(ಎನ್ನೆಸ್ಸೆಸ್) ವಿಭಾಗ, ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದ ಸಾಗರ ಕೇಂದ್ರ ಜೀವಂತ ಸಂಪನ್ಮೂಲಗಳು ಮತ್ತು ಪರಿಸರ ವಿಜ್ಞಾನ (ಸಿಎಂಎಲ್ಆರ್ಇ), ಶಬರಿ ಕ್ಲಬ್, ನೀಲೇಶ್ವರ ಕರಾವಳಿ ಪೆÇಲೀಸ್ ಠಾಣೆ, ಸಾಗರ ಮಿತ್ರ ಸ್ವಯಂಸೇವಕರು ಮತ್ತು ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಬೀಚ್ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸಹಕರಿಡಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪ್ಲಾಸ್ಟಿಕ್ ಸೇರಿದಂತೆ ನಾನಾ ವಿದದ ತ್ಯಾಜ್ಯ ಸಂಗ್ರಹಿಸಿ ಇವುಗಳಲ್ಲಿ ಪ್ಲಸ್ಟಿಕ್ ತ್ಯಾಜ್ಯ ಬೇರ್ಪಡಿಸಲಾಯಿತು. ಇವುಗಳನ್ನು ವೈಜ್ಞಾನಿಕ ವಿಲೇವಾರಿಗಾಗಿ ಮಹಾಯುಬಾ ಇಕೋ ಸೊಲ್ಯೂಷನ್ಸ್ಗೆ ಹಸ್ತಾಂತರಿಸಲಾಯಿತು.
ರಿಜಿಸ್ಟ್ರಾರ್ ಡಾ. ಎಂ. ಮುರಳೀಧರ ನಂಬಿಯಾರ್ ಅಭಿಯಾನ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಐಎಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಂಎಲ್ಆರ್ಇ ವಿಜ್ಞಾನಿ ಸಿ.ಆರ್. ಆಶಾದೇವಿ ಪ್ರತಿಜ್ಞೆ ಬೋಧಿಸಿದರು. ಕೇಂದ್ರೀಯ ವಿಶ್ವವಿದ್ಯಾಲಯದ ಸ್ವಚ್ಛತಾ ಹಿ ಸೇವಾ ನೋಡಲ್ ಅಧಿಕಾರಿ ಪೆÇ್ರ. ಮನು, ತಾಂತ್ರಿಕ ಅಧಿಕಾರಿ ಡಾ. ವಿ.ಸುಧೀಶ, ಸಿಎಂಎಲ್ಆರ್ಇ ವಿಜ್ಞಾನಿ ಡಾ. ಬಿ.ಆರ್. ಸ್ಮಿತಾ, ಮೀನುಗಾರಿಕೆ ವಿಸ್ತರಣಾಧಿಕಾರಿ ಅರುಣೇಂದು, ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಇ. ರತೀಶ್, ಶಬರಿ ಕ್ಲಬ್ ಕಾರ್ಯದರ್ಶಿ ಬಾಬು ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕ ವಿಷ್ಣು ಪ್ರಸಾದ್ ಉಪಸ್ಥಿತರಿದ್ದರು. ಈ ಸಂದರ್ಭ ರಮೇಶ ನಡುವಿಲ್ ನೇತೃತ್ವದಲ್ಲಿ ಕಡಲತೀರದಲ್ಲಿ ಸಂದೇಶ ಸಾರುವ ಪ್ರತಿಮೆಯನ್ನೂ ಸಿದ್ಧಪಡಿಸಲಾಯಿತು.