ಮಧೂರು/ಸುಬ್ರಹ್ಮಣ್ಯ: ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ಶ್ರೀಪಾದಂಗಳವರ ಸಮ್ಮುಖದಲ್ಲಿ ಸುಬ್ರಹ್ಮಣ್ಯ ಮಠದಲ್ಲಿ ನಡೆದ ತಾಳಮದ್ದಳೆಯ ಸಂದರ್ಭ ಸಿರಿಬಾಗಿಲು ಪ್ರತಿಷ್ಠಾನಕ್ಕೆ ಗೌರವಿಸಿ ಹರಿಸಿದರು.
ಗಡಿನಾಡು ಕಾಸರಗೋಡಿನಲ್ಲಿ ಸಾಹಿತ್ಯ ಸಾಂಸ್ಕøತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿರುವ ಅಧ್ಯಯನಕ್ಕಾಗಿ ಸಾಂಸ್ಕೃತಿಗೆ ಭವನ ಮೂಲಕ ಹಲವು ಸಮಾಜಮುಖಿಯಾಗಿರುವ ಸಿರಿಬಾಗಿಲು ಪ್ರತಿμÁ್ಠನದ ಚಟುವಟಿಕೆಯಿಂದ ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಷ್ಠಾನಕ್ಕೆ ಭೇಟಿ ನೀಡಲಿದ್ದೇವೆ." ಎಂದು ಶ್ರೀ ಪಾದಂಗಳವರು ತಿಳಿಸಿದರು. ಪ್ರತಿಷ್ಠಾನವು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಸಮಾಜಕ್ಕೆ ನೀಡುವಂತಾಗಲಿ. ಶ್ರೀಮಠದ ಆಶೀರ್ವಾದ ನಿರಂತರ ಪ್ರತಿμÁ್ಠನಕ್ಕೆ, ಅಧ್ಯಕ್ಷ ರಾಮಕೃಷ್ಣ ಮಯ್ಯ ರಿಗೆ ಇದೆ ಎಂದು ಶ್ರೀಗಳು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಶರ್ಮಾ ಅವರು ಸಂಯೋಜಿಸುವ ಮೂಲಕ ಕಾರ್ಯಕ್ರಮವನ್ನು ನಿರೂಪಿಸಿದರು. ಜಯರಾಮ ದೇವಸ್ಯರವರು ಪ್ರತಿಷ್ಠಾನದ ಚಟುವಟಿಕೆಗಳನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿ ಅಭಿನಂದನೆ ಸಲ್ಲಿಸಿದರು. ವಿಜಯ ಭಟ್ ಪಂಜ ಸಹಕರಿಸಿದರು. ಬಳಿಕ ಸಿರಿಬಾಗಿಲು ಪ್ರತಿಷ್ಠಾನ ಪ್ರಕಾಶಿಸಿದ ಕೃತಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸುಧನ್ವ ಮೋಕ್ಷ ಆಖ್ಯಾಯಿಕೆಯ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ವೆಂಕಟ್ರಾಜ್ ಕುಂಠಿಕಾನ, ಚೆಂಡೆ ಮದ್ದಲೆಯಲ್ಲಿ ಬಾಲಸುಬ್ರಹ್ಮಣ್ಯ ದೇವಸ್ಯ, ಲಕ್ಷ್ಮೀಶ ಪಂಜ, ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶ್ರೀಕೃಷ್ಣ ಶರ್ಮ, ಕಂಬಲಿಕೆರೆ ಗಣೇಶ್ ಶರ್ಮ, ಜಯರಾಮ ಭಟ್ ದೇವಸ್ಯ, ಗುಂಡ್ಯಡ್ಕ ಈಶ್ವರ ಭಟ್ ಮೊದಲಾದವರು ಸಹಕರಿಸಿದರು. ಜಯರಾಮ ಭಟ್ ದೇವಸ್ಯ ಕಾರ್ಯಕ್ರಮ ಸಂಯೋಜಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು.