HEALTH TIPS

ಕಿರುಕುಳ ಪ್ರಕರಣ; ನಟ, ಶಾಸಕ ಮುಖೇಶ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ವಿಶೇಷ ತನಿಖಾ ತಂಡ ಹೈಕೋರ್ಟ್ ಮೊರೆ

              ಕೊಚ್ಚಿ: ನಟಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುಕೇಶ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ವಿಶೇಷ ತನಿಖಾ ತಂಡ ಹೈಕೋರ್ಟ್ ಮೊರೆ ಹೋಗಲಿದೆ.

             ಸರ್ಕಾರಿ ವಕೀಲರಿಂದ ಕಾನೂನು ಸಲಹೆ ಪಡೆದ ವಿಶೇಷ ತನಿಖಾ ತಂಡ ಮೇಲ್ಮನವಿ ಸಲ್ಲಿಸುವ ಹಂತದಲ್ಲಿದೆ.

          ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡುವುದರಿಂದ ಮುಂದಿನ ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದು ತನಿಖಾ ತಂಡ ಹೈಕೋರ್ಟ್ ಮೆಟ್ಟಿಲೇರಲಿದೆ. ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಎರ್ನಾಕುಳಂ ಸೆಷನ್ಸ್ ಕೋರ್ಟ್ ಮುಖೇಶ್ ಮತ್ತು ನಟ ಇಡವೇಳ ಬಾಬುಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

              ಕೇರಳ ಬಿಟ್ಟು ಹೋಗಬಾರದು ಮತ್ತು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ಮುಖೇಶ್‍ಗೆ ಜಾಮೀನು ನೀಡಲಾಗಿತ್ತು. ನಟಿಯ ದೂರು ಹುಸಿಯಾಗಿದ್ದು, ಆಕೆ ತನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಾಳೆ ಎಂಬುದು ಮುಖೇಶ್ ಅವರ ಹೇಳಿಕೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries