HEALTH TIPS

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರಿನಲ್ಲಿ ನಡೆಯಿತು. 
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಹಾಗೂ ವರ್ಕಾಡಿ ಗ್ರಾಮ ಪಂಚಾಯತ್  ಸದಸ್ಯ ಅಬ್ದುಲ್ ಮಜೀದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲರಾದ   ವಿಜಯ ಕುಮಾರ್ ಕಾರ್ಯಕ್ರಮ ಕ್ಕೆ ಶುಭ ಕೋರಿದರು.  DSGA ಕಾರ್ಯದರ್ಶಿಯಾದ

ಸಂತೋಷ ಕುಮಾರ್, ರಕ್ಷಕ ಶಿಕ್ಷಕ ಸಂಘದ   ಸದಸ್ಯ  ಉಸ್ಮಾನ್  ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ರಿಯಾನಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ
ಉದಯ ಕುಮಾರ್ ಸ್ವಾಗತಿಸಿದರು ಶಾಲಾ ಮುಖ್ಯೋಪಾಧ್ಯಾಯನಿ  ಕೃಷ್ಣವೇಣಿ ಬಿ ವಂದಿಸಿದರು.  ಕಿಶೋರ್ ರವರು ಕಾರ್ಯಕ್ರಮ ನಿರೂಪಿಸಿದರು.
ಆತಿಥೇಯ ಶಾಲೆಯಾದ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರಿನ  ಹುಡುಗರ ಮತ್ತು ಹುಡುಗಿಯರು ತಂಡ ಸಬ್ ಜೂನಿಯರ್ ವಿಭಾಗ ಮತ್ತು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ , ಸೀನಿಯರ್  ಹುಡುಗರ ವಿಭಾಗದಲ್ಲಿ ದ್ವಿತೀಯ  ಸ್ಥಾನವನ್ನು ಗೆದ್ದುಕೊಂಡಿತು. ಎಸ್ .ಡಿ ಪಿ.ಎಚ್.ಎಸ್ ಧರ್ಮತಡ್ಕದ  ಜೂನಿಯರ್ ವಿಭಾಗದ ಹುಡುಗರ ತಂಡ ದ್ವಿತೀಯ ಸ್ಥಾನ , ಸೀನಿಯರ್  ವಿಭಾಗದ ಹುಡುಗರ ತಂಡ  ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ. ಇನ್ ಫ್ಯಾಂಟ್ ಜೀಸಸ್ ಮಂಜೇಶ್ವರ ದ ಹುಡುಗಿಯರ ತಂಡ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದುಕೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries