ಕಾಸರಗೋಡು: ಜಿಲ್ಲಾಡಳಿತದ ನೇತೃತ್ವದಲ್ಲಿ ಪರವನಡ್ಕ ವೃದ್ಧ ಮಂದಿರದಲ್ಲಿ ಓಣಂ ಆಚರಣೆ ನಡೆಯಿತು.ವೃದ್ದಾಶ್ರಮ ನಿವಾಸಿಗಳಿಗೆ ಓಣಂ ಉಡುಗೊರೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಉದ್ಘಾಟಿಸಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್, ವೃದ್ಧ ಮಂದಿರದ ಮೇಲ್ವಿಚಾರಕ ನಿಶಾಂತ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಹಮದ್ ಶೆರೀನ್, ನಿರ್ಮಲ್ ಕಾರಡ್ಕ ಮಾತನಾಡಿದರು. ಜಾನಪದ ಗಾಯಕ ಅಭಿರಾಜ್ ಮಧು ಮುಖ್ಯ ಅತಿಥಿಯಾಗಿದ್ದರು.