ಓದುಗರು ಕಟ್ಟಿ ಬೆಳೆಸಿರುವ ಸಮರಸ ಸುದ್ದಿ ಎಂಟನೇ ವರ್ಷಕ್ಕೆ ಕಾಲಿರಿಸಿದ್ದು, ಈ ಸಂದರ್ಭ ಅಕ್ಷರ ಲೋಕಕ್ಕೆ ‘ವಾರಧಿ’ ಎಂಬ ಹೆಸರಿನ ಮಾಸಿಕ ಇ-ಪತ್ರಿಕೆಯನ್ನು ತರುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 9 ರ ಬಳಿಕ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಪಾದಂಗಳವರು ವಾರದೀಯನ್ನು ಶ್ರೀಮಠದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸುವರು.
ಸಾಹಿತ್ಯ, ಕಲೆ, ಸಾಮಾಜಿಕ ಕಳಕಳಿಯ ಲೇಖನ ಸರಣಿಗಳು ವಾರಧಿಯ ಮೂಲಕ ನವ ಮಾಧ್ಯಮದಲ್ಲಿ ನಿಯಮಿತವಾಗಿ ಪ್ರಕಟಗೊಳ್ಳಲಿದೆ. ಸಹೃದಯ ಓದುಗರು ಬೆಂಬಲಿಸಬೇಕಾಗಿ ಈ ಮೂಲಕ ಸಮರಸ ಬಳಕ ಭಿನ್ನಮಿಸುತ್ತದೆ.