ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜನಸೇವಾ ವಿಶ್ವಸ್ಥ ನಿಧಿ ಟ್ರಸ್ಟ್ ವತಿಯಿಂದ ಶುಕ್ರವಾರ ಓಣಂ ಹಬ್ಬದ ಆಚರಣೆ ನಡೆಯಿತು. ನಿವೃತ್ತ ಅಬಕಾರಿ ಅಧಿಕಾರಿ ಬಾಬುಕುಮಾರ್ ದೀಪಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಶಿವಶಂಕರ ಭಟ್ ಗುಣಾಜೆ, ರಮೇಶ್ ಕಳೇರಿ, ಆಶ್ರಮದ ಹಿತೈಷಿಗಳಾದ ಸುರೇಶ್ ಯಾದವ್, ರಾಜೇಶ್ ಮಾಸ್ತರ್ ಅಗಲ್ಪಾಡಿ, ಶಿಶು ಮಂದಿರ ಶಿಕ್ಷಕಿ ಸವಿತಾ ಹಾಗೂ ಬಾಲಗೋಕುಲ ಶಿಕ್ಷಕಿ ಭಾರತಿ, ಮಾತೃಮಂಡಳಿ ಅಧ್ಯಕ್ಷೆ ಇಂದಿರ ಉಪಸ್ಥಿತರಿದ್ದರು. ನಂತರ ಮಕ್ಕಳು ಹಾಗೂ ಮಾತೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಲಾಯಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ಅಶ್ವಿತಾ ವಂದಿಸಿದರು.