HEALTH TIPS

ಕೇಂದ್ರ ಸರ್ಕಾರದ ಯೋಜನೆಗಳು ಕೇರಳದ ಜನರಿಗೆ ತಲುಪುತ್ತಿಲ್ಲ: ಜಾರ್ಜ್ ಕುರಿಯನ್

ಅಲುವಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳು ಕೇರಳದ ಜನಸಾಮಾನ್ಯ  ಕೈಗೆ ತಲುಪುತ್ತಿಲ್ಲ ಎಂದು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಹೇಳಿರುವರು.

ಕಾಲಡಿಯಲ್ಲಿ ಪ್ರಧಾನಮಂತ್ರಿಯವರ ಮಾಸಿಕ ಉಪನ್ಯಾಸ ಕಾರ್ಯಕ್ರಮ ಮನ್ ಕಿ ಬಾತ್‍ನಲ್ಲಿ ಪಾಲ್ಗೊಂಡು ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ಜನಾಂದೋಲನ ಮಾಡಬೇಕು. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ಮುಂದಾಗಬೇಕು ಎಂದರು.

ಜಿಲ್ಲಾಧ್ಯಕ್ಷ ಕೆ.ಎಸ್.ಶೈಜು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಭಾಸಿತಕುಮಾರ್, ಜಿಲ್ಲಾ ಉಪಾಧ್ಯಕ್ಷ ಅಡ್ವ.. ರಮಾದೇವಿ ತೋಟುಂಗಲ್, ಮಂಡಲ ಅಧ್ಯಕ್ಷ ಎ. ಸೆಂಥಿಲ್ ಕುಮಾರ್, ರಾಜ್ಯ ಸಮಿತಿ ಸದಸ್ಯ ಎಂ.ಎನ್. ಗೋಪಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಪೆರುಂಪಟಣ್ಣವರ, ಕೆ.ಆರ್.ರೇಗಿ, ಬೂತ್ ಪ್ರಧಾನ ಕಾರ್ಯದರ್ಶಿ ಸಜೀಶ ಅಶೋಕಪುರಂ, ಪಿ.ಟಿ. ಮೋಹನದಾಸ್ ಹಾಗೂ ಜ್ಯೋತಿμï ಅಶೇಕ ಮುಖಂಡರಾದ ಕೆ.ಎಸ್. ಬಾಲಕೃಷ್ಣನ್, ಪಿ.ಸಿ. ರೆಗ್, ಸನೀಶ್ ಕಲಪ್ಪುರೈಕ್ಕಲ್, ಸೋಮಶೇಖರನ್, ಪಿ.ಸಿ. ಬಾಲಚಂದ್ರನ್ ಮತ್ತಿತರರು ಮಾತನಾಡಿದರು. ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಆಲುವಾ ವಿಧಾನಸಭಾ ಕ್ಷೇತ್ರದ 127ನೇ ಮತಗಟ್ಟೆಯಲ್ಲಿ ಕೇಂದ್ರ ಸಚಿವರು ಮನೆ ಸಂಪರ್ಕಕ್ಕೆ ಚಾಲನೆ ನೀಡಿದರು. ಹಲವರು ಸಚಿವರಿಂದ ಬಿಜೆಪಿ ಸದಸ್ಯತ್ವ ಸ್ವೀಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries