ಲಕ್ನೋ: ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಫೋನ್ ಸ್ಕ್ರಾಲ್ ಮಾಡುತ್ತಾ ರೋಗಿಯು ಎಚ್ಚರವಾಗಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಕ್ನೋ: ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಫೋನ್ ಸ್ಕ್ರಾಲ್ ಮಾಡುತ್ತಾ ರೋಗಿಯು ಎಚ್ಚರವಾಗಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹರಿಶ್ಚಂದ್ರ ಪ್ರಜಾಪತಿ (56) ತೀವ್ರ ತಲೆನೋವು ಮತ್ತು ಎಡಗೈ ಮತ್ತು ಕಾಲಿನ ದೌರ್ಬಲ್ಯದಿಂದ ಬಳಲುತ್ತಿದ್ದರು.
ಹೀಗಾಗಿ ಉತ್ತರ ಪ್ರದೇಶದ ಲಕ್ನೋದ ಚಕ್ ಗಂಜಾರಿಯಾದಲ್ಲಿರುವ ಕಲ್ಯಾಣ್ ಸಿಂಗ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ಗೆ ಭೇಟಿ ನೀಡಿದ್ದರು. ಈ ವೇಳೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿದೆ. ಜೊತೆಗೆ ಪಾರ್ಶ್ವವಾಯು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು.
ವೈದ್ಯರು ಅವೇಕ್ ಕ್ರಾನಿಯೊಟೊಮಿ ತಂತ್ರವನ್ನು ಬಳಸಿಕೊಂಡು ಬ್ರೈನ್ ಟ್ಯೂಮರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಈ ವೇಳೆ ರೋಗಿಯು ಎಚ್ಚರವಾಗಿದ್ದ. ಜೊತೆಗೆ ತನ್ನ ಮೊಬೈಲ್ ಬಳಸುತ್ತಿದ್ದ. ಜೊತೆಗೆ ಪೆನ್ನು ಹಿಡಿದುಕೊಳ್ಳುವುದು ಮತ್ತು ಅವನ ಕಾಲುಗಳನ್ನು ಚಲಿಸುವಂತಹ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ.
ಈ ವಿಧಾನದಿಂದಾಗಿ ಕೈ ಮತ್ತು ಕಾಲುಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಬಗ್ಗೆ ಖಾತ್ರ ಪಡೆಸಿಕೊಳ್ಳಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.