HEALTH TIPS

ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಕೆ.ಟಿ. ಜಲೀಲ್

ಮಲಪ್ಪುರಂ: ತಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಎಡಪಕ್ಷದ ಪಕ್ಷೇತರ ಶಾಸಕ ಕೆ.ಟಿ. ಜಲೀಲ್ ತಿಳಿಸಿದ್ದಾರೆ. ಪಿ.ವಿ. ಅನ್ವರ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಫೇಸ್‍ಬುಕ್‍ನಲ್ಲಿ ಘೋಷಣೆ ಮಾಡಲಾಗಿದೆ.

ಸರ್ಕಾರಿ ಅಧಿಕಾರಿಗಳಲ್ಲಿರುವ ವಂಚಕರನ್ನು ಬಯಲಿಗೆಳೆಯಲು ಸಮಯಾವಕಾಶ ತೆಗೆದುಕೊಂಡು ಎಡಪಂಥೀಯರಾಗಿಯೇ ಉಳಿಯುತ್ತೇನೆ ಎಂದು ಜಲೀಲ್ ತಿಳಿಸಿದ್ದಾರೆ. ಸಂಕ್ಷಿಪ್ತವಾಗಿ, ಅಧಿಕಾರ ರಾಜಕಾರಣದಿಂದ ಹಿಂದೆ ಸರಿಯುತ್ತಿರುವುದು ಸೂಚನೆ. 

ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಧಿಕಾರ ಅಗತ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ಸಿಪಿಎಂ ಒಡನಾಡಿಯಾಗಿಯೇ ಇರುವೆ. ಸಿಪಿಎಂ ನೀಡಿದ ಬೆಂಬಲ ಮತ್ತು ಮನ್ನಣೆಯನ್ನು ಮರೆಯಲಾಗದು. ಅಧಿಕಾರಿಗಳ ವಂಚನಾ ಸರಣಿಗಳು ಬಯಲಾಗಲಿದೆ. ಅದಕ್ಕಾಗಿ ಪೋರ್ಟಲ್ ಆರಂಭಿಸಲಾಗುವುದು. ಅಕ್ಟೋಬರ್ 2 ರಂದು ಬಿಡುಗಡೆಯಾಗಲಿರುವ 'ಸ್ವರ್ಗಸ್ಥನಾದ ಗಾಂಧೀಜಿ' ಅಂತಿಮ ಅಧ್ಯಾಯದಲ್ಲಿ ವಿವರಗಳಿವೆ ಎಂದು ಜಲೀಲ್ ತಿಳಿಸಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries