HEALTH TIPS

ನಿರೀಕ್ಷಣಾ ಜಾಮೀನಿಗೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ನಟ ಜಯಸೂರ್ಯ

ಕೊಚ್ಚಿ: ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಟರಾದ ಜಯಸೂರ್ಯ ಮತ್ತು ಬಾಬುರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕಿರುಕುಳ ನಡೆದಿದೆ ಎಂದು ದೂರುದಾರರು ಆರೋಪಿಸಿರುವ ದಿನಾಂಕಗಳಲ್ಲಿ ವಿರೋಧಾಭಾಸವಿದೆ ಎಂದು ಜಯಸೂರ್ಯ ಮನವಿಯಲ್ಲಿ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 354 ವಿಧಿಸಿರುವುದರಿಂದ ಎಫ್‍ಐಆರ್ ಅನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿಲ್ಲ. ವಿದೇಶದಲ್ಲಿರುವುದರಿಂದ ಎಫ್‍ಐಆರ್‍ನ್ನು ಖುದ್ದಾಗಿ ನೋಡಿಲ್ಲ. ಜಯಸೂರ್ಯ ಸೆಪ್ಟೆಂಬರ್ 18 ರಂದು ವಿದೇಶದಿಂದ ಹಿಂತಿರುಗಲಿದ್ದಾರೆ. ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಪರಿಗಣಿಸಿ ಜಾಮೀನು ನೀಡಬೇಕು ಎಂದು ಜಯಸೂರ್ಯ ಅರ್ಜಿಯಲ್ಲಿ ಕೋರಿದ್ದಾರೆ.

ಜಯಸೂರ್ಯ ವಿರುದ್ಧ ಹೆಣ್ತನಕ್ಕೆ ಅವಮಾನ ಮತ್ತು ಬಲವಂತದ ಚುಂಬನಕ್ಕೆ ಮಹಿಳೆಯರನ್ನು ಒಳಪಡಿಸಲು ಯತ್ನಿಸಿದ ಶೀರ್ಷಿಕೆಯಡಿ ಎರಡು ಪ್ರಕರಣಗಳು ದಾಖಲಾಗಿವೆ. ಜಯಸೂರ್ಯ ವಿರುದ್ಧ ಪ್ರಕರಣಗಳು ಎರ್ನಾಕುಳಂ ಕೂತಟ್ಟುಕುಳಂ ಮತ್ತು ತಿರುವನಂತಪುರಂ ಕಂಟೋನ್ಮೆಂಟ್ ಠಾಣೆಗಳಲ್ಲಿ ದಾಖಲಾಗಿವೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries