ಆಲಪ್ಪುಳ: ಸೈಕಲ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗುತ್ತಿದ್ದ ಲಾರಿ ಚಾಲಕನನ್ನು ಚೇಸ್ ಮಾಡಿ ಹಿಡಿಯುವ ಮೂಲಕ ನಟಿ ನವ್ಯಾ ನಾಯರ್, ನಿಜ ಜೀವನಲ್ಲಿಯೂ ತಾನೊಬ್ಬ ನಾಯಕಿ ಎಂಬುದನ್ನು ಸಾಬೀತು ಮಾಡಿದ್ದಾರೆ.
ಆಲಪ್ಪುಳ: ಸೈಕಲ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗುತ್ತಿದ್ದ ಲಾರಿ ಚಾಲಕನನ್ನು ಚೇಸ್ ಮಾಡಿ ಹಿಡಿಯುವ ಮೂಲಕ ನಟಿ ನವ್ಯಾ ನಾಯರ್, ನಿಜ ಜೀವನಲ್ಲಿಯೂ ತಾನೊಬ್ಬ ನಾಯಕಿ ಎಂಬುದನ್ನು ಸಾಬೀತು ಮಾಡಿದ್ದಾರೆ.
ಆಲಪ್ಪುಳ ಜಿಲ್ಲೆಯ ಪಟ್ಟಣಕ್ಕಾಡ್ ಗ್ರಾಮದ ಇಂಡಿಯನ್ ಕಾಫಿ ಹೌಸ್ ಬಳಿ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ.
ರಮೇಶನ್ ಪ್ರಯಾಣಿಸುತ್ತಿದ್ದ ಸೈಕಲ್ಗೆ ಹರಿಯಾಣ ನೋಂದಣಿಯ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಚಾಲಕ ಲಾರಿ ನಿಲ್ಲಿಸದೇ ಅಲ್ಲಿಂದ ಪರಾರಿಯಾಗುತ್ತಿರುವುದನ್ನು ನಟಿ ನವ್ಯಾ ಮತ್ತು ಅವರ ಕುಟುಂಬ ನೋಡಿದೆ. ತಕ್ಷಣ ಲಾರಿಯನ್ನು ಚೇಸ್ ಮಾಡಿ, ತಡೆದು ನಿಲ್ಲಿಸಿದ್ದಾರೆ. ಬಳಿಕ ನವ್ಯಾ ಅವರು ಕಂಟ್ರೋಲ್ ರೂಂಗೆ ಕರೆ ಮಾಡಿ ಅಪಘಾತದ ವರದಿ ಮಾಡಿದ್ದಾರೆ.
ನವ್ಯಾ ಅವರು ವರದಿ ನೀಡುತ್ತಿದ್ದಂತೆ ಹೆದ್ದಾರಿ ಪೊಲೀಸರು ಮತ್ತು ಪಟ್ಟಣಕ್ಕಾಡ್ ಎಎಸ್ಐ ಸ್ಥಳಕ್ಕೆ ತಲುಪಿ, ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕನನ್ನು ಪೊಲೀಸರ ವಶಕ್ಕೆ ನೀಡಿ ನವ್ಯಾ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಗಾಯಗೊಂಡ ರಮೇಶನ್ ಅವರನ್ನು ಹೆದ್ದಾರಿ ಪೊಲೀಸ್ ವಾಹನದಲ್ಲಿ ತುರವೂರು ತಾಲೂಕು ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಟಿ ನವ್ಯಾ ನಾಯರ್ ಮತ್ತು ಅವರ ಕುಟುಂಬ ಮುತ್ತುಕುಲಂನಲ್ಲಿರುವ ತಮ್ಮ ಮನೆಯಲ್ಲಿ ಓಣಂ ಆಚರಣೆಯನ್ನು ಮುಗಿಸಿ ಎರ್ನಾಕುಲಂಗೆ ಮರಳುತ್ತಿದ್ದರು. ಕಾರಿನಲ್ಲಿ ನವ್ಯಾ ಜತೆಗೆ ಅವರ ತಂದೆ, ತಾಯಿ, ಸಹೋದರ ಹಾಗೂ ಮಗ ಸಾಯಿಕೃಷ್ಣ ಇದ್ದರು ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ.