HEALTH TIPS

ಆಯುಷ್ಮಾನ್ ವಿಮಾ ಯೋಜನೆ ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘದಿದಂದ ಸ್ವಾಗತ


ಕಾಸರಗೋಡು: ಆದಾಯಮಿತಿಯಿಲ್ಲದೆ ದೇಶದ 70ವರ್ಷ ಮೇಲ್ಪಟ್ಟ ಎಲ್ಲರಿಗೂ ಕೂಡಾ 5ಲಕ್ಷ ಆಯುಷ್ಮಾನ್ ವಿಮೆ ಯೋಜನೆಯನ್ನು ಜಾರಿಗೊಳಿಸಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ತೀರ್ಮಾನ ವನ್ನು ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘ ಸ್ವಾಗತಿಸಿದೆ.

ದೇಶದ ಎಲ್ಲಾ ವರ್ಗದ ಜನರಿಗೆ ಪ್ರಯೋಜನ ಸಿಗುವಂತಹ ಈ ಯೋಜನೆ ಭಾರತದ ಇತಿಹಾಸ ದಲ್ಲಿಯೇ ಪ್ರಥಮವಾಗಿದೆಯೆಂದು ಶ್ಲಾಘಸಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ  ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ದೇಶೀಯ ಅಧ್ಯಕ್ಷ ಸಿ. ಎಚ್. ಸುರೇಶ್, ಕೋಶಾಧಿಕಾರಿ ಕೆ. ದಯಾನಂದ, ಸದಸ್ಯರಾದ ಬಾಲಚಂದ್ರ, ರವೀಂದ್ರನ್ ನಾಯರ್, ಮಾಧವನ್ ನಾಯರ್, ಚಂದ್ರು, ಸತೀಶ ಮೊದಲಾದವರು ಉಪಸ್ತಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸಿ. ಎಚ್. ಜಯೇಂದ್ರ ಸ್ವಾಗತಿಸಿದರು. ಮುರಳೀಧರನ್ ವಂದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries