HEALTH TIPS

ಹಮಾಸ್‍ನ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡಿದ್ದ ಕಣ್ಣೂರಿನ ನರ್ಸ್ ಶೀಜಾ ಊರಿಗೆ

ಕಣ್ಣೂರು: ಕಳೆದ ವರ್ಷ ಇಸ್ರೇಲ್‍ನಲ್ಲಿ ಹಮಾಸ್ ಭಯೋತ್ಪಾದಕರು ನಡೆಸಿದ ರಾಕೆಟ್ ದಾಳಿಯಲ್ಲಿ ಗಾಯಗೊಂಡಿದ್ದ ಪಯ್ಯಾವೂರ್ ವನ್ನೈಕ್ಕಾಡುವಿನ ಶೀಜಾ ಆನಂದ್ ವಾಪಸಾಗಿದ್ದಾರೆ.

ಶೀಜಾ ದಕ್ಷಿಣ ಇಸ್ರೇಲ್‍ನ ಅಶ್ಕೆಲೋನ್‍ನಲ್ಲಿ ಏಳು ವರ್ಷಗಳಿಂದ ಕೇರ್‍ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಅಕ್ಟೋಬರ್ 7ರಂದು ರಾಕೆಟ್ ದಾಳಿಯಲ್ಲಿ ಶೀಜಾ ಗಾಯಗೊಂಡಿದ್ದರು.

ಶೀಜಾ ಅವರ ಕೈ, ಕಾಲು, ಹೊಟ್ಟೆ ಮತ್ತು ಬೆನ್ನುಮೂಳೆಗಳಿಗೆ ಭಾರೀ ಗಾಯಗಳಾಗಿತ್ತು. ತಕ್ಷಣ ಅವರನ್ನು ಸಮೀಪದ ಬೆರ್ಸಲೈ ಆಸ್ಪತ್ರೆಗೆ ರವಾನಿಸಲಾಯಿತು. ನಂತರ ಅವರನ್ನು ವಿಶೇಷ ಚಿಕಿತ್ಸೆಗಾಗಿ ಟೆಲ್ ಅವೀವ್‍ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೊಟ್ಟೆ ಮತ್ತು ಬೆನ್ನುಮೂಳೆ ಚಿಪ್ಪುಗಳು ಪುಡಿಯಾಗಿದ್ದವು. ಅವರ ಗಾಯಗಳು ವಾಸಿಯಾದ ನಂತರ ಇದೀಗ ಊರಿಗೆ ಮರಳಿದ್ದಾರೆ.

ಪಯ್ಯಾವೂರು ನಿವಾಸಿ ಆನಂದನ್ ಶೀಜಾ ಅವರ ಪತಿ. ಅವರಿಗೆ ಅವನಿ ಆನಂದ್ ಮತ್ತು ಅನಾಮಿಕಾ ಆನಂದ್ ಎಂಬ ಇಬ್ಬರು ಮಕ್ಕಳಿದ್ದಾರೆ. ಶೀಜಾಳ ಚಿಕಿತ್ಸೆಗಾಗಿ ಆನಂದ್ ಕೂಡ ಇಸ್ರೇಲ್ ಗೆ ತೆರಳಿದ್ದರು. ಚಿಕಿತ್ಸೆ ಮತ್ತು ಇತರ ವಿಷಯಗಳನ್ನು ಇಸ್ರೇಲ್ ಸರ್ಕಾರವು ಸಂಪೂರ್ಣವಾಗಿ ಭರಿಸುತ್ತಿತ್ತು. ಆಯುರ್ವೇದ ಚಿಕಿತ್ಸೆ ಮಾಡುವ ಉದ್ದೇಶದಿಂದ ಗಾಯಗಳು ಸಂಪೂರ್ಣವಾಗಿ ವಾಸಿಯಾಗುವವರೆಗೆ ಚಿಕಿತ್ಸೆ ನೀಡಲು ಯೋಚಿಸಲಾಗಿದೆ ಎಂದು ಆನಂದ್ ಹೇಳಿದರು.

ಆಗಾಗ ಶೆಲ್ ದಾಳಿ ನಡೆಯುತ್ತಿದ್ದ ಕಾಲವದು. ಶೆಲ್ ಯಾವ ದಿಕ್ಕಿನಿಂದ ಬರುತ್ತಿದೆಯೋ ಅಲ್ಲಿ ಸೈರನ್ ಕೇಳಿಸುತ್ತದೆ. ಸೈರನ್ ಮೊಳಗಿದ ಒಂದು ನಿಮಿಷದಲ್ಲಿ ಶೆಲ್‍ಗಳು ಬಂದು ಬೀಳುತ್ತವೆ.  ಇದರೊಳಗೆ ಮನೆಯ ಸುರಕ್ಷಿತ ಕೊಠಡಿಗೆ ತೆರಳಬೇಕೆಂಬುದು ನಿಯಮ. ಅಪಘಾತದ ದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ನಿರಂತರ ಗುಂಡಿನ ದಾಳಿ ನಡೆದಿದೆ. ಆದರೆ ಆ ದಿನ ಒಮ್ಮೆಯೂ ಸೈರನ್ ಮೊಳಗಲಿಲ್ಲ. ಪತಿ ತನಗೆ ಪೋನ್ ಕರೆ ಮಾಡಿರುವ ಕಾರಣ ಹಾಲ್‍ಗೆ ಬಂದಾಗ ಅಪಘಾತ ಸಂಭವಿಸಿದೆ ಎಂದು ಶೀಜಾ ಹೇಳಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries