HEALTH TIPS

ಬಂಟ್ಸ್ ಪ್ರೀಮಿಯರ್ ಲೀಗ್ ಯುನೈಟೆಡ್ ಬಂಟ್ಸ್ ಕಾಸ್ರೋಡು-ವರ್ಕಾಡಿ: ದೀಪಾವಳಿ ಕ್ರೀಡಾಳುಗಳ ಹರಾಜು

ಮಂಜೇಶ್ವರ: ಬಂಟ ಸಮುದಾಯದವರಿಗೋಸ್ಕರ ಯುನೈಟೆಡ್ ಬಂಟ್ಸ್ ಕಾಸರಗೋಡು-ವರ್ಕಾಡಿ ಆಯೋಜಿಸುವ ದೀಪಾವಳಿಗೆ ನಡೆಯಲಿರುವ ಎಂಟು ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪ್ರೀಮಿಯರ್ ಲೀಗಿನ ಹರಾಜು ಪ್ರಕ್ರಿಯೆಯು ವರ್ಕಾಡಿ ಪಂಚಾಯತಿ ಸುಂಕದಕಟ್ಟೆಯ ವಿಶ್ವಪ್ರಭ ಸಭಾಂಗಣದಲ್ಲಿ ನಡೆಯಿತು.

 ಕಬ್ಬಡಿ ರಾಷ್ಟ್ರೀಯ ಕ್ರೀಡಾಳು ಹಾಗೂ ಸೀನಿಯರ್ ಕೋಚ್ ಸುಕೇಶ್ ಭಂಡಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮುದಾಯದ ಕ್ರೀಡಾಳುಗಳು ಬೆಳಗಬೇಕೆಂದು ಹಾರೈಸಿದರು. ಯುನೈಟೆಡ್ ಬಂಟ್ಸ್ ಸ್ಥಾಪಕ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ರಾಜಕುಮಾರ ಶೆಟ್ಟಿ ಮುಟ್ಲ, ಶೆಟ್ಟಿ ಬ್ರದರ್ ಕೂಳುರಿನ ಜಯರಾಜ್ ಶೆಟ್ಟಿ, ಆನೆಯಾಲ ಗುತ್ತು ಕಿಶೋರ್ ಶೆಟ್ಟಿ, ಯುನೈಟೆಡ್ ಬಂಟ್ಸ್ ಸಹ ಮಾಲಕ ಚಂದ್ರಹಾಸ ರೈ ಅಮೀನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಪ್ರೀಮಿಯರ್ ಲೀಗಿನ ಸಂಯೋಜಕ ರೋಹಿತ್ ರೈ ವರ್ಕಾಡಿ ವಂದಿಸಿದರು. ರಾಕೇಶ್ ಶೆಟ್ಟಿ ಮಾಸ್ತರ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ವಿಕ್ಯಾತ್ ಆಳ್ವ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು, ಪ್ರಜ್ಞೆಶ್ ಶೆಟ್ಟಿ ಸಂತೋಷ್ ಶೆಟ್ಟಿ, ಪ್ರದೀಶ್ ಶೆಟ್ಟಿ ಸಹಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries