ಮುಳ್ಳೇರಿಯ: ಪ್ರಣವ್ ಫೌಂಡೇಶನ್ ಹಾಗೂ ಆರ್.ವಿ ಚಾರಿಟೇಬಲ್ ಟ್ರಸ್ಟ್ ಸಹಯೋಗದ ಪುಸ್ತಕ-2024, ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಅಡೂರಿನ ಸರ್ಕಾರಿ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯ ಸರ್ಕಾರಿ ಆರೋಗ್ಯ ಸೇವೆಯ ನಿವೃತ್ತ ಉಪನಿರ್ದೇಶಕ ಡಾ. ಕೆ ರವಿಪ್ರಸಾದ್, ಫೌಂಡೇಶನಿನ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶನ್ ಮಾಸ್ತರ್ ವಹಿಸಿದ್ದರು. ಸಿ.ಕೆ ಕುಮಾರನ್ ಶುಭಾಶಂಸನೆ ಗೈದರು. ಪ್ರಣವ್ ಫೌಂಡೇಶನ್ನ ಟ್ರಸ್ಟಿ ಗುರುರಂಜನ ಪುಣಿಂಚತ್ತಾಯ ಫೌಂಡೇಶನ್ನ ಕುರಿತಾದ ಮಾಹಿತಿಯನ್ನು ನೀಡಿ ಒಂದನೇ ತರಗತಿಯ ಸುಮಾರು 76 ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಕುಮಾರಿ, ವಾರ್ಡ್ ಸದಸ್ಯ ಇಕ್ಬಾಲ್, ವಿಜಯರಾಜ್ ಪುಣಿಂಚತ್ತಾಯ, ಶಾರದಾ ಪಿ, ಶಾಫಿ ಹಾಜಿ ಮುಂತಾದವರು ಉಪಸ್ಥಿತರಿದ್ದರು. ಸುಧಾಮ ಮಾಸ್ತರ್ ಸ್ವಾಗತಿಸಿ, ಗಂಗಾಧರನ್ ವಂದಿಸಿದರು.