HEALTH TIPS

ವಯನಾಡ್‍ಗೆ ನೈಸರ್ಗಿಕ ವಿಕೋಪ ಎಚ್ಚರಿಕೆ ವ್ಯವಸ್ಥೆ ಸ್ಥಾಪಿಸಿದ ಅಮೃತ ವಿಶ್ವವಿದ್ಯಾಲಯ

ಕೊಲ್ಲಂ: ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ, ಭೂಕುಸಿತದ ಪ್ರಮಾಣ ಮತ್ತು ಪರಿಣಾಮವನ್ನು ಊಹಿಸಲು ಅಮೃತ ವಿಶ್ವವಿದ್ಯಾಲಯ ಪೂರ್ವ ಎಚ್ಚರಿಕೆ ವ್ಯವಸ್ಥೆ ಸ್ಥಾಪಿಸಿದೆ. 

ಅಮೃತಾನಂದಮಯಿ ದೇವಿ ಅವರ ಸೂಚನೆ ಮೇರೆಗೆ ರಚಿಸಲಾಗಿದ್ದ ತಜ್ಞರ ತಂಡವು ವಯನಾಡಿನ ವಿಪತ್ತು ಪ್ರದೇಶಗಳಾದ ಮೇಪಾಡಿ, ವೆಳುತ್ತಾನ ಮತ್ತು ವೈತ್ತಿರಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ತಂಡವು ಸಿದ್ಧಪಡಿಸಿದ ವರದಿಯನ್ನು ಆಧರಿಸಿ, ವಯನಾಡಿನ ಹೆಚ್ಚಿನ ಪ್ರದೇಶಗಳಲ್ಲಿ ಅಪಾಯದ ವಲಯ ಗಣನೆಗೆ ತೆಗೆದುಕೊಂಡು ಅಮೃತಾನಂದಮಯಿ ಮಠದಲ್ಲಿ ಎಚ್ಚರಿಕೆ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಈ ರೀತಿಯಾಗಿ, ಅಧಿಕಾರಿಗಳು ವಿಪತ್ತಿನ ಅಪಾಯವನ್ನು ನಿರೀಕ್ಷಿಸಬಹುದು ಮತ್ತು ಪ್ರದೇಶದಿಂದ ಜನರನ್ನು ಸ್ಥಳಾಂತರಿಸಬಹುದು ಮತ್ತು ವಿಪತ್ತು ತಡೆಗಟ್ಟುವಲ್ಲಿ ಹೆಚ್ಚು ನಿಖರತೆಯನ್ನು ಖಚಿತಪಡಿಸಿಕೊಳ್ಳಬಹುದು.

ಅಮೃತಾ ಸೆಂಟರ್ ಫಾರ್ ವೈರ್‍ಲೆಸ್ ನೆಟ್‍ವರ್ಕ್ ಮತ್ತು ಅಪ್ಲಿಕೇಶನ್ ನಿರ್ದೇಶಕ ಮತ್ತು ಪ್ರೊಫೆಸರ್, ಸನ್ಯಾಸಿ  ಡಾ. ಮನಿಷಾ ವಿ. ರಮೇಶ್ ಈ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿರುವರು. ಭೂಕುಸಿತದ ಆರಂಭಿಕ ಪತ್ತೆ ಅನೇಕ ಜೀವಗಳನ್ನು ಉಳಿಸಲು ನೆರವಾಗುತ್ತವೆ ಎಂದರು. 

2009ರಲ್ಲಿ ಮುನ್ನಾರ್‍ನಲ್ಲಿ ಸ್ಥಾಪಿಸಲಾದ ಅಮೃತಾ ಭೂಕುಸಿತದ ಮುಂಚಿನ ಎಚ್ಚರಿಕೆ ವ್ಯವಸ್ಥೆಯು ತನ್ನ ಸಮಯೋಚಿತ ಎಚ್ಚರಿಕೆಯಿಂದಾಗಿ ಎರಡು ವಾರಗಳ ಹಿಂದೆ ಮುನ್ನಾರ್‍ನಲ್ಲಿ ಸಂಭವಿಸಿದ ಭೂಕುಸಿತ ಅನಾಹುತದಿಂದ ಅನೇಕ ಜನರನ್ನು ರಕ್ಷಿಸಿತ್ತು. ಅಮೃತ ವಿಶ್ವವಿದ್ಯಾನಿಲಯದ ವಿಪತ್ತು ತಗ್ಗಿಸುವಿಕೆ ಸಂಶೋಧನಾ ಜಾಲವು ಭೂಕುಸಿತವನ್ನು ಮುಂಚಿತವಾಗಿ ಪತ್ತೆಹಚ್ಚುವ ವಿಶ್ವದ ಮೊದಲ ವೈರ್‍ಲೆಸ್ ಸೆನ್ಸಾರ್ ನೆಟ್‍ವರ್ಕ್ ಅನ್ನು ಅಭಿವೃದ್ಧಿಪಡಿಸಿದೆ. ಮುನ್ನಾರ್‍ನಲ್ಲಿ ಕೃತಕ ಬುದ್ಧಿಮತ್ತೆ-ಪ್ರೇರಿತ ಆವೃತ್ತಿಯನ್ನು ಸ್ಥಾಪಿಸಲಾಗಿದೆ. ಅಂತಹ ವ್ಯವಸ್ಥೆಗಳನ್ನು ಸ್ಥಾಪಿಸಲು ಅಮೃತಾ ಒಡಿಶಾ ಮತ್ತು ಕರ್ನಾಟಕ ರಾಜ್ಯಗಳೊಂದಿಗೆ ಎಂಒಯುಗಳಿಗೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದರು.

2017 ರಿಂದ, ಭೂಕುಸಿತದ ಕುರಿತಾದ ಇಂಟನ್ರ್ಯಾಷನಲ್ ಕನ್ಸೋರ್ಟಿಯಂ (ಐಸಿಎಲ್) ಭೂಕುಸಿತ ತಡೆಗಟ್ಟುವಿಕೆಗೆ ತನ್ನ ಸಂಶೋಧನಾ ಗಮನವನ್ನು ಗುರುತಿಸಿ ಭೂಕುಸಿತ ತಡೆಗಟ್ಟುವಿಕೆಗಾಗಿ ಅಮೃತವನ್ನು ಶ್ರೇಷ್ಠತೆಯ ಕೇಂದ್ರವೆಂದು ಘೋಷಿಸಿದೆ.

ವಿಪತ್ತು ಪರಿಹಾರ ಚಟುವಟಿಕೆಗಳತ್ತ ಗಮನಹರಿಸಿರುವ ಮಾತಾ ಅಮೃತಾನಂದಮಯಿ ಮಠವು ವಿಪತ್ತು ಸಂತ್ರಸ್ತರಿಗೆ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯವನ್ನು ನೀಡುವುದನ್ನು ಮುಂದುವರೆಸಿದೆ. 2001 ರಿಂದ, ಮಠವು ಭಾರತದಾದ್ಯಂತ ನೈಸರ್ಗಿಕ ವಿಕೋಪಗಳ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳಿಗಾಗಿ 700 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ವಿನಿಯೋಗಿಸಿದೆ.

ಎರಡು ರೀತಿಯ ಪರೀಕ್ಷೆ:

ವಿಪತ್ತು ಅಪಾಯದ ಬಗ್ಗೆ ಮೊದಲೇ ಎಚ್ಚರಿಕೆ ನೀಡಲು ಅಮೃತ ವಿಶ್ವವಿದ್ಯಾಲಯವು ಎರಡು ರೀತಿಯ ಪರೀಕ್ಷೆಗಳನ್ನು ನಡೆಸುತ್ತದೆ. ಸ್ಥಳೀಯ ಡೇಟಾ ಮೂಲಗಳು ಮತ್ತು ಉಪಗ್ರಹ ಆಧಾರಿತ ವೀಕ್ಷಣೆಯನ್ನು ಬಳಸಿಕೊಂಡು ಡೇಟಾವನ್ನು ಸಂಗ್ರಹಿಸಲಾಗುತ್ತದೆ.

ಭೂಕುಸಿತ ಮತ್ತು ಮಳೆಯ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು, ಇಳಿಜಾರಿನ ವೈಫಲ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು ಅವಶ್ಯಕ. ಉಪಗ್ರಹ ಆಧಾರಿತ ಅವಲೋಕನಗಳು ದೀರ್ಘಾವಧಿಯ ಮತ್ತು ನಿರಂತರ ಮೇಲ್ವಿಚಾರಣೆ ಮತ್ತು ಎಚ್ಚರಿಕೆಯನ್ನು ನೀಡಬಲ್ಲವು. ಉಪಗ್ರಹ ಆಧಾರಿತ ವೀಕ್ಷಣೆಗಳು 25 ಕಿಮೀ ವ್ಯಾಪ್ತಿಯಲ್ಲಿ ಡೇಟಾವನ್ನು ಸಂಗ್ರಹಿಸುತ್ತದೆ. 

ಭೂಕುಸಿತ ಪೀಡಿತ ಪ್ರದೇಶಗಳು, ಜನನಿಬಿಡ ಪ್ರದೇಶಗಳು ಮತ್ತು ಜೀವಹಾನಿಯ ಅಪಾಯವನ್ನು ಸಾಧನಗಳನ್ನು ಸ್ಥಾಪಿಸುವ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರ ತಂಡ ವಿಸ್ತೃತ ಅಧ್ಯಯನ ನಡೆಸಲಿದೆ. ಸರ್ಕಾರಿ ವ್ಯವಸ್ಥೆಗಳೊಂದಿಗೆ ಕೆಲಸ ಸಮನ್ವಯಗೊಳಿಸಲಾಗುವುದು.

ಅಮೃತಾದ ತಜ್ಞರ ತಂಡವು 2006 ರಿಂದ ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರವಾಹ ಮತ್ತು ಭೂಕುಸಿತದ ಅಧ್ಯಯನಗಳನ್ನು ನಡೆಸಲಾಗುತ್ತದೆ. ಕೇಂದ್ರ ಹವಾಮಾನ ವೀಕ್ಷಣಾಲಯದ ಎಚ್ಚರಿಕೆಗಳನ್ನು ಪರಿಗಣಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತಿಯೊಂದು ಸ್ಥಳದಲ್ಲಿಯೂ ಅನಾಹುತದ ಅಪಾಯವನ್ನು ಮುನ್ನೆಚ್ಚರಿಕೆ ನೀಡಿ ಜನರನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿದೆ.

ಮಳೆಯ ಪ್ರಮಾಣ, ಗಾಳಿಯ ಉಷ್ಣತೆ, ನೆಲದ ಕಂಪನ ಮತ್ತು ಪರ್ವತದ ಇಳಿಜಾರಿನ ಬದಲಾವಣೆಯನ್ನು ಮೌಲ್ಯಮಾಪನ ಮಾಡುವ ಮೂಲಕ ಎಚ್ಚರಿಕೆ ನೀಡಲಾಗುವುದು. ಇದನ್ನು 3-4 ಗಂಟೆಗಳ ಮೊದಲೇ ಮಾಡಬಹುದಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries