HEALTH TIPS

ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

 ಮುಂಬೈ: 2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಫಕೀರನಂತೆ (ತಪಸ್ವಿಯಂತೆ) ಕಣಕ್ಕಿಳಿದಿದ್ದೆ. ಅಲ್ಲಿ ದೊರೆತ ಗೆಲುವು ನಿಜವಾಗಿಯೂ ಸಂಪೂರ್ಣ ಗೆಲುವಲ್ಲ ಎಂದು ಶರದ್‌ ಪವಾರ್‌ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ-ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ ಹೇಳಿದ್ದಾರೆ.

ಅವರು ಬಾರಾಮತಿಯಲ್ಲಿ 2009ರಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.

ಸಿಎನ್‌ಎನ್‌ ನ್ಯೂಸ್‌-18 ವಾಹಿನಿಯೊಂದಿಗೆ ಮಾತನಾಡಿರುವ ಸುಳೆ, 'ಚುನಾವಣೆಯಲ್ಲಿ ತಪಸ್ವಿಯಂತೆ ಹೋರಾಡಿದ್ದೆ' ಎಂದು ಪ್ರತಿಪಾದಿಸಿದ್ದಾರೆ.

ಎನ್‌ಸಿಪಿ-ಎಸ್‌ಪಿಯ ಕಾರ್ಯಾಧ್ಯಕ್ಷೆಯೂ ಆಗಿರುವ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಲ್ಲಿ ಅವರ ಅತ್ತಿಗೆಯೇ (ಅಜಿತ್‌ ಪವಾರ್‌ ಪತ್ನಿ) ಕಣಕ್ಕಿಳಿದಿದ್ದರು. ಈ ಕುರಿತು ಮಾತನಾಡಿರುವ ಸುಳೆ, 'ಗೆಲ್ಲುತ್ತೇನೆ ಎಂಬುದು ನನಗೇ ಸಂಪೂರ್ಣ ಖಾತ್ರಿ ಇರಲಿಲ್ಲ. ಏಕೆಂದರೆ ಹಲವು ವಿರೋಧಾಭಾಸಗಳನ್ನು ಎದುರಿಸುತ್ತಿದ್ದೆ' ಎಂದಿದ್ದಾರೆ.

ಮುಂದುವರಿದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆಗೆ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ಬಹುಶಃ ಅಸಂಭವ. ಚುನಾವಣೆ ಬಳಿಕ ಸೂಕ್ತ ಅಭ್ಯರ್ಥಿಯ ಆಯ್ಕೆ ಆಗಲಿದೆ ಎಂದು ತಿಳಿಸಿದ್ದಾರೆ.

ಎನ್‌ಸಿಪಿ-ಎಸ್‌ಪಿಯು ಎಂವಿಎ ಮೈತ್ರಿಕೂಟದಲ್ಲಿರುವ ಪ್ರಮುಖ ಪಕ್ಷವಾಗಿದೆ. ಕಾಂಗ್ರೆಸ್‌ ಹಾಗೂ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷಗಳೂ ಮೈತ್ರಿಕೂಟದಲ್ಲಿವೆ.

ಪಕ್ಷ ವಿಭಜನೆ ಕುರಿತಂತೆ, ತಮ್ಮಿಂದ ಪಕ್ಷ ಮತ್ತು ಅದರ ಚಿಹ್ನೆಯನ್ನು ಕಸಿದುಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries