HEALTH TIPS

ನಾನು ಕೋರ್ಟ್​ ಮೊರೆ ಹೋಗ್ತೀನಿ! ನಟಿ ಕಂಗನಾ ಚಿತ್ರ ಹೇರಿದ 'ಎಮರ್ಜೆನ್ಸಿ

           ಮುಂಬೈ: ಬಾಲಿವುಡ್​ ಸ್ಟಾರ್​ಗಳ ಪೈಕಿ ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಸ್ಟಾರ್​ ನಟಿ, ಸಂಸದೆ ಕಂಗನಾ ರಣಾವತ್, ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದು, ಈ ಬಾರಿ ತಮ್ಮ ಹೇಳಿಕೆಗಲ್ಲ! ಬದಲಿಗೆ ಹೊಸ ಸಿನಿಮಾದ ಬಿಡುಗಡೆ ವಿಷಯಕ್ಕೆ.

           ಇಂದಿರಾ ಗಾಂಧಿ ಅವರ ಕಥೆಯನ್ನು ಒಳಗೊಂಡಿರುವ 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಈ ಚಿತ್ರವು ಇದೇ ಸೆ.06ರಂದು ಜಾಗತಿಕವಾಗಿ ರಿಲೀಸ್ ಆಗಲು ಸಜ್ಜಾಗಿದೆ. ಸದ್ಯ ವಿವಾದಕ್ಕೀಡಾಗಿರುವ ಈ ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಕೆಲವರು ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಇದೆಲ್ಲದರ ಮಧ್ಯೆಯೇ ರಿಲೀಸ್​ಗೆ ಎದುರುನೋಡುತ್ತಿದ್ದ ಪ್ಯಾನ್ ಇಂಡಿಯಾ ಸಿನಿಮಾಗೆ ಸೆನ್ಸಾರ್​ ಮಂಡಳಿಯಿಂದ ಸಂಕಷ್ಟ ಎದುರಾಗಿದೆ.

                ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿರುವ ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ಕೇವಲ ನಾಲ್ಕು ದಿನಗಳ ಬಾಕಿ ಉಳಿದಿದೆ ಅಷ್ಟೇ. ಈ ಮಧ್ಯೆಯೇ ಚಿತ್ರತಂಡಕ್ಕೆ ಚಲನಚಿತ್ರ ಸೆನ್ಸಾರ್​ ಮಂಡಳಿ ಶಾಕ್ ನೀಡಿದ್ದು, ಸೆನ್ಸಾರ್​ ಪ್ರಮಾಣ ಪತ್ರಿಕೆಯನ್ನು ಇನ್ನು ಚಿತ್ರತಂಡಕ್ಕೆ ಹಸ್ತಾಂತರಿಸಿಲ್ಲ. ಸದ್ಯ ಈ ವಿಷಯ ನಟಿಯ ಕೆಂಡಾಮಂಡಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ರಣಾವತ್ ಅವರ ಒಂದಷ್ಟು ಸೀನ್​ಗಳನ್ನು ಸೆನ್ಸಾರ್ ಮಂಡಳಿ ಕಟ್ ಮಾಡಿದೆ ಎಂದು ಹೇಳಲಾಗಿದೆ. ಸಿನಿಮಾದ ಅನ್​ ಕಟ್ ವರ್ಷನ್​ ನನಗೆ ಸಿಗದೆ ಹೋದರೆ ಖಂಡಿತ ನಾನು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

               ಈ ಬಗ್ಗೆ ಮಾತನಾಡಿರುವ ಕಂಗನಾ, 'ನನ್ನ ಚಿತ್ರದ ಮೇಲೂ ಎಮರ್ಜೆನ್ಸಿ ಹೇರಿದ್ದಾರೆ. ಇದು ಅತ್ಯಂತ ಹತಾಶ ಸ್ಥಿತಿ. ನಮ್ಮ ದೇಶದಲ್ಲಿ ಇಂತಹ ಘಟನೆಗಳಿಂದ ತೀವ್ರ ಅಸಮಾಧಾನ ಉಂಟಾಗಿದೆ. ಇನ್ನೆಷ್ಟು ಸಹಿಸಿಕೊಳ್ಳಬೇಕು? ಭಯಪಡಬೇಕು' ಎಂದು ನಟಿ ಅತೀವ ಬೇಸರ ಹೊರಹಾಕಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries