HEALTH TIPS

ಕನ್ನಡ ಭವನದ ಯುವ ಪ್ರತಿಭಾ ಪ್ರಶಸ್ತಿ "ಭರವಸೆಯ ಬೆಳಕು" ಸ್ಟೂಡೆಂಟ್ ಅಚೀವ್‍ಮೆಂಟ್ ಅವಾರ್ಡ್‍ಗೆ ಅರ್ಜಿ ಆಹ್ವಾನ

                 ಕಾಸರಗೋಡು : ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ ಪ್ರತಿಷ್ಠಿತ ಯುವ ಪ್ರತಿಭಾ ಪ್ರಶಸ್ತಿಯಾದ 'ಭರವಸೆಯ ಬೆಳಕು'ಸ್ಟೂಡೆಂಟ್ ಅಚೀವ್ಮೆಂಟ್ ಅವಾರ್ಡ್ 2024 ಪ್ರಶಸ್ತಿಪ್ರದನ ಸಮಾರಂಭ ಅ. 6ರಂದು ಮಧ್ಯಾಹ್ನ 2ಗಂಟೆಗೆ ಕಾಸರಗೋಡು ಪಾಂಗೋಡು ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ. 

               ಅ. 3ರಿಂದ 13ರ ವರೆಗೆ   ನಡೆಯಲಿರುವ "ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವ-2024 ವೇದಿಕೆಯಲ್ಲಿ ನಡೆಯುವ ಕಾಸರಗೋಡು ದಸರಾ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಸತ್ಯಶಾಂತ ಪ್ರತಿಷ್ಠಾನ ಮೂಡುಬಿದ್ರೆ ಇವರ "ಗಾನ ಲಹರಿ "ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಕಾರ್ಯಕ್ರಮ ನಡೆಯಲಿದೆ.  

                ಈ ಬಾರಿಯ ಯುವಪ್ರತಿಭಾ ಪ್ರಶಸ್ತಿ ಯನ್ನು ಶಿಕ್ಷಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಕಾಸರಗೋಡು ಜಿಲ್ಲೆಯ ಆಯ್ದ 15 ಪದವಿ ಮತ್ತು ತಾಂತ್ರಿಕ ಕಾಲೇಜಿನ ತಲಾ ಎರಡು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ "ಭರವಸೆಯ ಬೆಳಕು "ಸ್ಟೂಡೆಂಟ್ ಅಚೀವ್ಮೆಂಟ್ ಅವಾರ್ಡ್ 2024 ನೀಡಲಾಗುತ್ತಿದೆ. ಆಯ್ಕೆ ಆಯಾ ಕಾಲೇಜಿನ ವ್ಯವಸ್ಥಾಪಕ ಮಂಡಳಿಗಳದ್ದಾಗಿರುತ್ತದೆ. ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದ ಹಾಗೂ ಪಠ್ಯೇತರ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡವರಾಗಿರಬೇಕು.  ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು, ಭಾವಚಿತ್ರ, ಕಾಲೇಜು ಅಧಿಕಾರಿಗಳ ಶಿಫಾರಸ್ಸು ಪತ್ರ, ಕಾಲೇಜಿನ ಹೆಸರಿನೊಂದಿಗೆ, 9633073400, 9746093552.ಮೊಬೈಲ್ ನಂಬರಿಗೆ ಕರೆಮಾಡಿ ವಾಟ್ಸಪ್ ಮೂಲಕ ಕಳುಹಿಸಬೇಕು ಎಂದು ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ಸಂಚಾಲಕ, ಕಾಸರಗೋಡು ಕನ್ನಡ ಭವನದ ಪ್ರಕಟಣೆ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries