HEALTH TIPS

ಮುಖ್ಯಮಂತ್ರಿ ಕಚೇರಿ ಭೂಗತ ಲೋಕದ ಕೇಂದ್ರವಾಗಿ ಮಾರ್ಪಟ್ಟಿದ್ದು, ಸಿಪಿಎಂ ಕೂಡಲೇ ಈ ಡಕಾಯಿತನನ್ನು ಕಿತ್ತೊಗೆಯಬೇಕು: ಚೆನ್ನಿತ್ತಲ

ತಿರುವನಂತಪುರ: ಮುಖ್ಯಮಂತ್ರಿ ಕಚೇರಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಚಿನ್ನಾಭರಣ ವಂಚನೆಯಲ್ಲಿ ತೊಡಗಿದ್ದು, ಶಿವಶಂಕರ್‍ನಿಂದ ಹಿಡಿದು ಎಡಿಜಿಪಿವರೆಗೆ ಈ ಮಾಫಿಯಾದ ಭಾಗವಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.

ಪಿ.ಶಶಿ ಈ ಮಾಫಿಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಕೇರಳ ಮುಖ್ಯಮಂತ್ರಿ ಕಚೇರಿಯು ಭೂಗತ ಜಗತ್ತಿನ ದೊಡ್ಡ ಕೇಂದ್ರವಾಗಿ ಮಾರ್ಪಟ್ಟಿದೆ. ಸಿಪಿಎಂ ಈ ಡಕಾಯಿತನನ್ನು ತಕ್ಷಣವೇ ಹೊರಹಾಕಲು ಏನು ಮಾಡಬೇಕೋ ಅದನ್ನು ಮಾಡಬೇಕು. ಇಲ್ಲದಿದ್ದಲ್ಲಿ ಅದು ಜನತೆಗೆ ಮಾಡುವ ಘೋರ ದ್ರೋಹವಾಗುತ್ತದೆ.

ಚಿನ್ನಾಭರಣ ದಂಧೆಯಲ್ಲಿ ಎಸ್‍ಪಿ ಸುಜಿತ್‍ಕುಮಾರ್, ಎಡಿಜಿಪಿ ಅಜಿತ್‍ಕುಮಾರ್ ಅವರ ಪಾತ್ರದ ಬಗ್ಗೆ ಸಷ್ಟ್ಟನೆ ನೀಡುವ ಸಾಕ್ಷ್ಯಾಧಾರಗಳನ್ನು ಪಿ.ವಿ.ಅನ್ವರ್ ಮುಖ್ಯಮಂತ್ರಿಗೆ ಹಸ್ತಾಂತರಿಸಿದರೂ ಮುಖ್ಯಮಂತ್ರಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ತಪ್ಪಿತಸ್ಥ ಉನ್ನತಾಧಿಕಾರಿಗಳನ್ನು ಸಂಪೂರ್ಣವಾಗಿ ರಕ್ಷಿಸುವ ಮೂಲಕ ಅನ್ವರ್‍ನನ್ನು ನಿರಾಕರಿಸಿದರು.

ತ್ರಿಶೂರ್ ಪೂರಂ ಧ್ವಂಸದಿಂದ ಹಿಡಿದು ಚಿನ್ನದ ಕಳ್ಳಸಾಗಣೆವರೆಗಿನ ಸಂಪೂರ್ಣ ಮಾಫಿಯಾ ಚಟುವಟಿಕೆಗಳನ್ನು ಸಮಗ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ರಾಜ್ಯದ ಮುಖ್ಯಮಂತ್ರಿ ಒಂದು ಕ್ಷಣವೂ ಆ ಸ್ಥಾನದಲ್ಲಿ ಇರಲು ಬಿಡಬಾರದು. ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ರಮೇಶ್ ಚೆನ್ನಿತ್ತಲ ಆಗ್ರಹಿಸಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries