HEALTH TIPS

ಮಧೂರು ಬ್ರಹ್ಮಕಲಶೋತ್ಸವ-ಮುಳಿಯಾರು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ

               ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಮಹೋತ್ಸವವು ಮುಂದಿನ ಮಾ. 27 ರಿಂದ ಮೊದಲ್ಗೊಂಡು ಏಪ್ರಿಲ್ 7 ರ ತನಕ ಜರಗಲಿದ್ದು ಸಮಾರಂಭದ ಯಶಸ್ವಿಗಾಗಿ ಮುಳಿಯಾರು ಪ್ರಾದೇಶಿಕ ಸಮಿತಿಯ ರೂಪೀಕರಣ ಸಭೆ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ನಡೆಯಿತು. 

             ಮಂಜುನಾಥ ಕಾಮತ್ ದಿಕ್ಸ್ಸೂಚಿ ಮಾತುಗಳನ್ನಾಡಿದರು.ಮಧೂರು ಶ್ರೀಕ್ಷೇತ್ರದ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ  ಸಮಾರಂಭದ ರೂಪರೇಖೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಗೀರೀಶ್ ಸಂಧ್ಯಾ ಶುಭಾಶಂಸನೆಗೈದರು. ರತನ್ ಕುಮಾರ್ ಕಾಮಡ , ರಾಮಯ್ಯ ಭಟ್, ಸುರೇಶ ನಾಯಕ್, ಮುರಳಿ ಗಟ್ಟಿ, ಮುರಳಿ ಬಂದಡ್ಕ, ಯೋಗೀಶ್ ಮಧೂರು, ಜಗದೀಶ್ ಕೂಡ್ಲು ಉಪಸ್ಥಿತರಿದ್ದರು.


         ಸಭೆಯಲ್ಲಿ ಮುಳಿಯಾರು ಪ್ರಾದೇಶಿಕ ಸಮಿತಿ ರೂಪೀಕರಿಸಲಾಯಿತು. ಸೀತಾರಾಮ ಬಳ್ಳುಳ್ಳಾಯ ಗೌರವಾಧ್ಯಕ್ಷರು, ಗೋವಿಂದಬಳ್ಳಮೂಲೆ ಅಧ್ಯಕ್ಷರು, ರಾಜನ್ ಮುಳಿಯಾರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಮಿತಿಗೆ ಇತರ ಸದಸ್ಯರನ್ನು ಮುಂದಿನ ಸಭೆಯಲ್ಲಿ ಸೇರ್ಪಡೆಗೊಳಿಸಿ  ವಿಫುಲೀಕರಿಸಿ  ಕಾರ್ಯಕ್ರಮ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.

     ಸಭೆಯ ಅಧ್ಯಕ್ಷತೆ ವಹಿಸಿದ ಸೀತಾರಾಮ ಬಳ್ಳುಳ್ಳಾಯ ಮಾತನಾಡಿ, ಸಾಮಾರಂಭದ ಯಶಸ್ವಿಗಾಗಿ ಸರ್ವರೂ ಒಂದಾಗಿ ಸಹಕರಿಸಲು ಕರೆಯಿತ್ತರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ರಾಜನ್ ಮುಳಿಯಾರು ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries