ಕೋಲ್ಕತ್ತ: ಕೋಲ್ಕತ್ತದಲ್ಲಿ ಸೆ.14 ರಂದು ನಡೆಯಬೇಕಿದ್ದ ತಮ್ಮ ಸಂಗೀತ ಕಾರ್ಯಕ್ರಮವನ್ನು ಶ್ರೇಯಾ ಘೋಷಾಲ್ ಮುಂದೂಡಿದ್ದಾರೆ. ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಿಂದ ಬಹಳ ನೋವುಂಟಾಗಿದೆ ಹೀಗಾಗಿ ಸಂಗೀತ ಸಂಜೆಯನ್ನು ಮುಂದೂಡುವುದಾಗಿ ಹೇಳಿದ್ದಾರೆ.