HEALTH TIPS

ಜಾತಿ ಗಣತಿ ಪದ ಉಚ್ಚರಿಸಲು ಮೋದಿಗೆ ಭಯ: ರಾಹುಲ್ ಗಾಂಧಿ

 ವದೆಹಲಿ: ಬಿಜೆಪಿಯು 'ಬಹುಜನ' ವಿರೋಧಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದ್ದಾರೆ.

'ಎಷ್ಟೇ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೂ ಮೀಸಲಾತಿಗೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ. ಜಾತಿಗಣತಿ ಎಂಬ ಪದವನ್ನು ಉಚ್ಚರಿಸಲು ಪ್ರಧಾನಿ ನರೇಂದ್ರ ಮೋದಿ ಭಯಪಡುತ್ತಿದ್ದಾರೆ.

'ಬಹುಜನ'ರು ಅವರ ಹಕ್ಕುಗಳನ್ನು ಪಡೆಯುವುದು ಮೋದಿಯವರಿಗೆ ಇಷ್ಟವಿಲ್ಲ' ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಆರೋಪಿಸಿದ್ದಾರೆ.

'ಸಮಗ್ರ ಜಾತಿಗಣತಿ ನಡೆಸುವವರೆಗೂ ಮತ್ತು ಶೇ 50ರಷ್ಟು ಮೀಸಲಾತಿ ಮಿತಿ ತೆಗೆದುಹಾಕುವವರೆಗೂ ಹಾಗೂ ಪ್ರತಿಯೊಂದು ವರ್ಗಕ್ಕೂ ನ್ಯಾಯ ದೊರೆಯುವವರೆಗೂ ನಾವು ವಿರಮಿಸುವುದಿಲ್ಲ' ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries