HEALTH TIPS

ಮುಲ್ಲಪೆರಿಯಾರ್ ಸಮಸ್ಯೆ; ಸಮರ ಸಮಿತಿಯಿಂದ ತಿರುಓಣಂ ದಿನ ಉಪವಾಸ ಸತ್ಯಾಗ್ರಹ

ಇಡುಕ್ಕಿ: ಮುಲ್ಲಪೆರಿಯಾರ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಮುಲ್ಲಪೆರಿಯಾರ್ ಸಮರ ಸಮಿತಿಯು ತಿರುಓಣಂ ದಿನದಂದು ಉಪವಾಸ ನಡೆಸಲಿದೆ.

ಉಪ್ಪುತ್ತರ ಪೇಟೆಯಲ್ಲಿ ಧರಣಿ ನಡೆಯಲಿದೆ. ಧಾರ್ಮಿಕ, ರಾಜಕೀಯ, ಸಾಂಸ್ಕøತಿಕ ಮುಖಂಡರೂ ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದ್ದು, ಅಂತಾರಾಷ್ಟ್ರೀಯ ಸಂಸ್ಥೆಯಿಂದ ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.

ಈಗಿನ ಅಣೆಕಟ್ಟನ್ನು ಬದಲಿಸಿ ಹೊಸ ಅಣೆಕಟ್ಟು ನಿರ್ಮಿಸಿ ತಮಿಳುನಾಡಿಗೆ ನೀರು ಹರಿಸಬೇಕು ಎಂಬುದು ಆಗ್ರಹ. ಕೇರಳಕ್ಕೆ ಭದ್ರತೆ, ತಮಿಳುನಾಡಿಗೆ ನೀರು ಎಂಬುದು ಘೋಷಣೆಯಾಗಿದೆ. ಸೆ.15ರಂದು ಬೆಳಗ್ಗೆ 9 ಗಂಟೆಗೆ ಸಂಸದ ಡೀನ್ ಕುರಿಯಾಕೋಸ್ ಧರಣಿಯನ್ನು ಉದ್ಘಾಟಿಸುವರು.

ಕೇರಳದ ಪರವಾಗಿ ಕೇಂದ್ರ ಜಲ ಆಯೋಗದಿಂದ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತಾ ಪರಿಶೀಲನೆಗೆ ಒತ್ತಾಯಿಸಿದೆ

ಅದು ಈಗಾಗಲೇ ಅಂಗೀಕರಿಸಲ್ಪಟ್ಟಿದೆ. 12 ತಿಂಗಳೊಳಗೆ ತಪಾಸಣೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. 13 ವರ್ಷಗಳ ಬಳಿಕ ಕೇರಳದ ಬೇಡಿಕೆಗೆ ಮನ್ನಣೆ ಸಿಕ್ಕಿದೆ.

ಈಗ ಸುರಕ್ಷತಾ ತಪಾಸಣೆ ಬೇಡ ಎಂಬ ತಮಿಳುನಾಡು ಬೇಡಿಕೆಯನ್ನು ಕೇಂದ್ರ ಜಲ ಆಯೋಗ ತಿರಸ್ಕರಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries