HEALTH TIPS

ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆ, ಸುಜಿತ್ ದಾಸ್ ವಿರುದ್ಧವೂ ತನಿಖೆ

ತಿರುವನಂತಪುರ: ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಸರ್ಕಾರ ಆದೇಶಿಸಿದ್ದು, ಪೋಲೀಸ್ ಮುಖ್ಯಸ್ಥರ ಶಿಫಾರಸನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ.

ಅಮಾನತುಗೊಂಡಿರುವ ಪತ್ತನಂತಿಟ್ಟ ಮಾಜಿ ಎಸ್ಪಿ ಸುಜಿತ್ ದಾಸ್ ವಿರುದ್ಧದ ಆರೋಪಗಳ ಬಗ್ಗೆಯೂ ವಿಜಿಲೆನ್ಸ್ ತನಿಖೆ ನಡೆಸಲಿದೆ. ತನಿಖಾ ತಂಡದ ಸದಸ್ಯರನ್ನು ಶುಕ್ರವಾರ ನಿರ್ಧರಿಸಲಾಗುವುದು.

ಅಜಿತ್ ಕುಮಾರ್ ವಿರುದ್ಧದ ವಿಜಿಲೆನ್ಸ್ ತನಿಖೆಯು ಅಕ್ರಮ ಆಸ್ತಿ ಗಳಿಕೆ ಮತ್ತು ಕೋಟ್ಯಂತರ ಮೌಲ್ಯದ ಕಟ್ಟಡಗಳ ವ್ಯಾಪ್ತಿಗೆ ಬರಲಿದೆ.

ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರನ್ನು ರಕ್ಷಿಸುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿಲುವಿನ ವಿರುದ್ಧ ಸಿಪಿಐ ಈ ಹಿಂದೆಯೇ ಹರಿಹಾಯ್ದಿತ್ತು.

ಸಿಪಿಐ ಮುಖವಾಣಿಯಲ್ಲಿ ಪ್ರಕಾಶ್ ಬಾಬು ಅವರ ಲೇಖನದಲ್ಲೂ ಟೀಕೆ ವ್ಯಕ್ತವಾಗಿದೆ. ಹಲವು ಆರೋಪಗಳ ನಡುವೆಯೂ ಎಂ.ಆರ್. ಅಜಿತ್ ಕುಮಾರ್ ಮುಂದುವರಿಸಿದ್ದಾರೆ ಎಂದೂ ಲೇಖನದಲ್ಲಿ ಗಮನಸೆಳೆದಿದ್ದಾರೆ.

ಆರ್‍ಎಸ್‍ಎಸ್ ಮುಖಂಡರ ಜತೆಗಿನ ಸಭೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries