HEALTH TIPS

ವಯನಾಡ್ ಭೂಕುಸಿತ: ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ: ವಿವರಿಸಿದ ಮುಖ್ಯಮಂತ್ರಿ

             ತಿರುವನಂತಪುರಂ: ವಯನಾಡ್ ಭೂಕುಸಿತ ದುರಂತದಲ್ಲಿ ಸಂತ್ರಸ್ತರಿಗೆ ಮತ್ತು ಮೃತರ ಅವಲಂಬಿತರಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿರುವರು.

            ದುರಂತದಲ್ಲಿ ಮೃತಪಟ್ಟವರ 131 ಕುಟುಂಬಗಳಿಗೆ ಇದುವರೆಗೆ ತಲಾ 6 ಲಕ್ಷ ರೂ. ಹಾಗೂ 173 ಮೃತರ ಅಂತ್ಯಸಂಸ್ಕಾರಕ್ಕೆ ತಲಾ 10 ಸಾವಿರ ರೂ.ನೀಡಲಾಗಿದೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಬೇಕಾದ 26 ಜನರಿಗೆ 17,16,000 ಸಹಾಯಧನ ನೀಡಲಾಯಿತು. ದುರಂತದಲ್ಲಿ ಗಾಯಗೊಂಡು ಒಂದು ವಾರದೊಳಗೆ ಆಸ್ಪತ್ರೆಗೆ ದಾಖಲಾದ ಎಂಟು ಮಂದಿಗೆ 4,43,200 ರೂ. 1013 ವಿಪತ್ತು ಪೀಡಿತ ಕುಟುಂಬಗಳಿಗೆ ತುರ್ತು ಆರ್ಥಿಕ ಸಹಾಯವಾಗಿ ತಲಾ 10,000 ನೀಡಲಾಗಿದೆ ಎಂದರು.

           ವಿಪತ್ತು ಸಂತ್ರಸ್ತ ಕುಟುಂಬಗಳ 1694 ಸದಸ್ಯರಿಗೆ ಜೀವನೋಪಾಯಕ್ಕಾಗಿ ದಿನಕ್ಕೆ 300 ರೂ.ನೀಡಲಾಗುತ್ತಿದೆ. 30 ದಿನಗಳಿಗೆ 1,52,46,000 ರೂ.ನೀಡಲಾಗಿದೆ. 33 ಹಾಸಿಗೆ ಹಿಡಿದ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಧನಸಹಾಯವಾಗಿ 2.97 ಲಕ್ಷ ರೂ.ನೀಡಲಾಗಿದೆ. 722 ಕುಟುಂಬಗಳಿಗೆ ತಲಾ ರೂ.6000 ಮಾಸಿಕ ಬಾಡಿಗೆ ನೀಡಲಾಗುತ್ತಿದೆ. 649 ಕುಟುಂಬಗಳಿಗೆ ಪೀಠೋಪಕರಣ ಸೇರಿದಂತೆ ಮನೆಯ ಕಿಟ್‍ಗಳನ್ನು ಸಹ ನೀಡಲಾಗಿದೆ. ಇದಲ್ಲದೇ ಪರಿಹಾರ ಶಿಬಿರದಲ್ಲಿದ್ದ 794 ಕುಟುಂಬಗಳಿಗೆ 28 ದಿನಗಳಲ್ಲಿ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries