HEALTH TIPS

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾತುರ್ಮಾಸ್ಯ ಮಂಗಲೋತ್ಸವ-ಎರಡು ತಿಂಗಳ ವ್ರತಾಚರಣೆ ಸಂಪನ್ನ


      ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಬುಧವರ ಮೃತ್ತಿಕಾ ವಿಸರ್ಜನೆ ನಡೆಸುವ ಮೂಲಕ ಮಂಗಲೋತ್ಸವ ನಡೆಯಿತು. ಈ ಮೂಲಕ ಕಳೆದ ಎರಡು ತಿಂಗಳ ಕಾಲ ನಡೆದುಬರುತ್ತಿರುವ ವ್ರತಾಚರಣೆ ಸಂಪನ್ನಗೊಂಡಿತು.

        ಬೆಳಗ್ಗೆ  ಪ್ರಾತ:ಕಾಲದ ಪೂಜೆ,  ಸೀಮೋಲ್ಲಂಘನ, ಭಜನೆ,  60ದಿವಸಗಳ ಅಖಂಡ ಭಜನಾ ಸಂಕೀರ್ತನೆ ಸಮಾರೋಪ  ನಡೆಯಿತು. ಬೆಳ್ತಂಗಡಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಭಜನಾಸಂಕೀರ್ತನ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ,  ಗುರುಗಳ ಆಶೀರ್ವಾದ ಲಭಿಸಬೇಕಾದರೆ ಶುದ್ಧ ಮನಸ್ಸಿನ ಪೂಜೆ ಅಗತ್ಯ. ಕಲುಷಿತ ಬುದ್ಧಿಯಲ್ಲಿರುವ ಮನುಜರಿಗೆ ಆಶೀರ್ವಚನ ಎಂದಿಗೂ ಫಲಿಸದು. ಬದುಕಿನಲ್ಲಿ ಜ್ಞಾನಿಗಳಾದಾಗ ಮಾತ್ರ ಶ್ರೇಷ್ಠ ಜೀವನ ಸಾಗಿಸಲು ಸಾಧ್ಯ. ಧಾರ್ಮಿಕ, ಸಾಂಸ್ಕøತಿಕ ಜಗತ್ತಿನ ಅನಾವರಣಕ್ಕೆ ಚಾತುರ್ಮಾಸ್ಯ ಕಾರ್ಯಕ್ರಮ ಕಾರಣವಾಗಿದೆ ಎಂದು ತಿಳಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಆಶೀರ್ವಚನ ನಿಡಿದರು. ಉಜಿರೆ ಅಶೋಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.


          ಈ ಸಂದರ್ಭ ಮಾಜಿ ಶಾಸಕ, ಕೇರಳ ಪೂರಕ್ಕಳಿ  ಅಕಾಡಮಿ ಅಧ್ಯಕ್ಷ ಕೆ. ಕುಞÂರಾಮನ್ ಅವರ ನೇತೃತ್ವದಲ್ಲಿ ದೇವಳ ನಡೆಯಲ್ಲಿ ಪೂರಕ್ಕಳಿ ನಡೆಯಿತು. ಮಧಾಹ್ನ  ಅಷ್ಟೋತ್ತರ ಶತ ನಾಳಿಕೇರ ಯಾಗದ ಪೂರ್ಣಾಹುತಿ, ಎಡನೀರುಶ್ರೀಗಳಿಂದ ಮಂತ್ರಾಕ್ಷತೆ ನಡೆಯಿತು. 

           ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇ ಸಂದರ್ಭ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ ಪುರಸ್ಕøತ , ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಹಾಗೂ ಯಕ್ಷಗಾನದ ಹಿರಿಯ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.  ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಪುತ್ತೂರು ಉಪಸ್ಥಿತರಿದ್ದರು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನಿಡಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಖ್ರಮ ನಿರೂಪಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.

            ಈ ಸಂದರ್ಭ  ಇಂದಿರಾ ಶರ್ಮ ಬೆಂಗಳೂರು ಹಾಗೂ ಮೇಧಾ ಮಂಜುನಾಥ್ ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ,  ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕøತ ಕಲೈ ಮಾಮಣಿ ವೀರಮಣಿ ರಾಜು ಮತ್ತು ಭಕ್ತಿಗಾನ ಗಂಧರ್ವ ಅಭಿಷೇಕ್ ರಾಜು ಚೆನ್ನೈ ಮತ್ತು ಬಳಗದವರಿಂದ ಭಕ್ತಿಗಾನ ಸಂಧ್ಯಾ ಕಾರ್ಯಕ್ರಮ ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries