HEALTH TIPS

ಉಪ್ಪಳದಲ್ಲಿ ಮಾದಕ ದ್ರವ್ಯ ಬೇಟೆ-ಆರೋಪಿ ಆಸ್ತಿ ಮುಟ್ಟುಗೋಲಿಗೆ ಕ್ರಮ

           ಕಾಸರಗೋಡು: ಉಪ್ಪಳದ ಮನೆಯಲ್ಲಿ ದಾಸ್ತಾನಿರಿಸಿದ್ದ ಮಾದಕ ದ್ರವ್ಯ ವಶಪಡಿಸಿಕೊಂಡಿರುವ ಪ್ರಕರಣದ ಆರೋಪಿ ಅಸ್ಗರ್ ಆಲಿಯ ಆಸ್ತಿಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಪೊಲೀಸರು ಕ್ರಮ ಆರಂಭಿಸಿದ್ದಾರೆ.

           ಮಾದಕ ದ್ರವ್ಯ ಜಾಲದ ತಂಡದಲ್ಲಿ ಹಲವಾರು ಮಂದಿ ಸದಸ್ಯರಿದ್ದು, ವಶಪಡಿಸಿಕೊಂಡಿರುವ ಮಾದಕ ಪದಾರ್ಥಕ್ಕಿಂತ ಅದೆಷ್ಟೋ ಪಾಲು ಸಾಗಿಸಲಾಗಿರುವ ಅಂಶ ತನಿಖೆಯಿಂದ ವ್ಯಕ್ತವಾಗಿದೆ. ಮಾದಕ ದ್ರವ್ಯ ವ್ಯವಹಾರಕ್ಕಾಗಿ ದಂಧೆಕೋರರು ಪ್ರತ್ಯೇಕ ಆ್ಯಪ್ ತಯಾರಿಸಿಕೊಂಡಿದ್ದು, ಇದರ ಮೂಲಕ ಹಣದ ವಹಿವಾಟು ನಡೆಸುತ್ತಿದ್ದರೆನ್ನಲಾಗಿದೆ. ಕಾಸರಗೋಡು ಹಾಗೂ ನೆರೆಯ ಜಿಲ್ಲೆಗಳಿಗೂ ಮಾದಕ ವಸ್ತು ಪೂರೈಸುವ ಜಾಲವನ್ನು ಬಂಧಿತ ಅಸ್ಗರ್ ಅಲಿ ಹೊಂದಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಉಪ್ಪಳ ಪೇಟೆಯ ವಿವಿಧ ಕೇಂದ್ರಗಳು ಮಾದಕ ದ್ರವ್ಯ ಮಾರಾಟದ ಅಡ್ಡೆಗಳಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿಯಿದ್ದರೂ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ದಂಧೆ ಈ ಮಟ್ಟಕ್ಕೆ ಬೆಳೆದು ನಿಂತಿರುವುದಾಗಿಯೂ ಮಾಹಿತಿಯಿದೆ.

             ಅಸ್ಗರ್‍ಆಲಿ ಮನೆಯಲ್ಲಿ ಮಾದಕ ದ್ರವ್ಯ ದಾಸ್ತಾನಿರಿಸಿ ಮಾರಾಟ ನಡೆಸುತ್ತಿದ್ದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ ಮಾಹಿತಿಯನ್ವಯ ದಾಳಿ ನಡೆಸಿ  3.409 ಕಿಲೋ ಗ್ರಾಂ ಎಂಡಿಎಂಎ, 640 ಗ್ರಾಂ. ಗಾಂಜಾ, 96.96 ಗ್ರಾಂ. ಕೊಕೇನ್, 30ಮಾದಕದ್ರವ್ಯ ಒಳಗೊಂಡ ಕ್ಯಾಪ್ಸೂಲ್ ವಶಪಡಿಸಿಕೊಳ್ಳಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries