HEALTH TIPS

ಕಾಪ್ಪ ಪ್ರಕರಣ ಆರೋಪಿಗೆ ಡಿವೈಎಫ್ ಐ ಪ್ರಾದೇಶಿಕ ಉಪಾಧ್ಯಕ್ಷ ಸ್ಥಾನ: ಹುಟ್ಟುಹಾಕಿದ ವಿವಾದ


              ಪತ್ತನಂತಿಟ್ಟ: ಎರಡು ತಿಂಗಳ ಹಿಂದೆ ಸಿಪಿಎಂ ಸೇರಿದ್ದ ಕಾಪ್ಪ ಪ್ರಕರಣದ ಆರೋಪಿಗೆ ಡಿವೈಎಫ್‍ಐ ಪ್ರಾದೇಶಿಕ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

                ಮಲಯಾಳಪುಳ ಡಿವೈಎಫ್‍ಐ ಪ್ರಾದೇಶಿಕ ಉಪಾಧ್ಯಕ್ಷರಾಗಿ ಕಾಪ್ಪ ಪ್ರಕರಣದ ಆರೋಪಿ ಶರಣಚಂದ್ರನ್ ಅವರನ್ನು ಆಯ್ಕೆಮಾಡಲಾಗಿದೆ. ನಿನ್ನೆ ನಡೆದ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಅವರು ಸಚಿವೆ ವೀಣಾ ಜಾರ್ಜ್ ಸಮ್ಮುಖದಲ್ಲಿ ಸಿಪಿಎಂ ಸೇರಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

              ಕಳೆದ ತಿಂಗಳು 29 ರಂದು ಪತ್ತನಂತಿಟ್ಟ ಮುಂಡುಕೊಟ್ಟೈಕ್ಕಲ್‍ನ ಡಿವೈಎಫ್‍ಐ ಕಾರ್ಯಕರ್ತ ಸ್ವದಶಿ ರಾಜೇಶ್ ಎಂಬವರು ವಿವಾಹ ಸಮಾರಂಭದಲ್ಲಿ ಶರಣಚಂದ್ರನ್ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದರು. ಈ ಘಟನೆ ಸಂಬಂಧ ಕಳೆದ ವಾರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬುಧವಾರ ರಾತ್ರಿ ಪೋಲೀಸರಿಗೆ ದೂರು ಬಂದಿತ್ತು. ನಂತರ ಪೆÇಲೀಸರು ಶರಣ್ ಚಂದ್ರನ್ ವಿರುದ್ಧ ಕ್ಷುಲ್ಲಕ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಬಾಕಿ ಇರುವಾಗಲೇ ಶರಣ್ ಅವರನ್ನು ಡಿವೈಎಫ್‍ಐ ಪ್ರಾದೇಶಿಕ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

               ಪಕ್ಷದ ಮೂಲಗಳ ಪ್ರಕಾರ, ಶರಣಚಂದ್ರನ್ ಅವರನ್ನು ಡಿವೈಎಫ್‍ಐ ಕೊನ್ನಿ ಬ್ಲಾಕ್ ಸಮಿತಿಗೆ ಸೇರಿಸಲು ಪಕ್ಷದ ನಾಯಕತ್ವವು ಆರಂಭದಲ್ಲಿ ಯೋಚಿಸಿತ್ತು, ಆದರೆ ತೀವ್ರ ವಿರೋಧದ ನಂತರ ಅವರನ್ನು ಪ್ರಾದೇಶಿಕ ಸಮಿತಿಯಲ್ಲಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದೇ ವೇಳೆ ಡಿವೈಎಫ್ ಐ ಕಾರ್ಯಕರ್ತನ ತಲೆ ಒಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಶರಣ್ ಚಂದ್ರನ್ ಸಿಪಿಎಂ ಸೇರುವ ಮುನ್ನ ಡಿವೈಎಫ್ ಐ-ಎಸ್ ಎಫ್ ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries