ತಿರುವನಂತಪುರಂ: ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿನೊಯ್ ವಿಶ್ವಂ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಎಡಿಜಿಪಿ ಅವರು ಆರ್ಎಸ್ಎಸ್ ಮುಖಂಡರನ್ನು ಭೇಟಿಯಾಗಲು ಏನು ಆಧಾರ? ಎಂದವರು ಪ್ರಶ್ನಿಸಿದ್ದಾರೆ.
ಎಡಿಜಿಪಿ ವಿರುದ್ಧದ ತನಿಖೆಗೆ ಮುಖ್ಯಮಂತ್ರಿ ಕಾಲಾವಕಾಶ ಕೇಳಿದರೆ ಅರ್ಥವಾಗುತ್ತದೆ. ಇದರರ್ಥ ತನಿಖೆಯನ್ನು ಅನಿರ್ದಿಷ್ಟವಾಗಿ ಮುಂದೂಡಬಹುದು ಎಂದಲ್ಲ ಎಂದು ಬಿನೋಯ್ ವಿಶ್ವಂ ಪ್ರತಿಕ್ರಿಯಿಸಿರುವರು.
ಎಡಿಜಿಪಿ-ಆರ್ಎಸ್ಎಸ್ ಸಭೆ ವಿವಾದದ ಕುರಿತು ಸಿಪಿಐ ನಿಲುವನ್ನು ಯಾವಾಗಲೂ ಪ್ರಶ್ನಿಸಬಾರದು ಎಂದು ಬಿನೊಯ್ ವಿಶ್ವಂ ಹೇಳಿದ್ದಾರೆ. ಎಲ್ಡಿಎಫ್ ಆರೆಸ್ಸೆಸ್ ಅನ್ನು ವಿರೋಧಿಸುವ ರಾಜಕೀಯ ಬಣವಾಗಿದೆ. ಕೇರಳದ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಎಡಿಜಿಪಿ ಆರ್ಎಸ್ಎಸ್ ಮುಖಂಡರನ್ನು ಎರಡು ಬಾರಿ ಭೇಟಿ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು.
ಸಿಪಿಐ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿನೋಯ್ ವಿಶ್ವಂ ಸ್ಪಷ್ಟಪಡಿಸಿದ್ದಾರೆ.