ತಿರುವನಂತಪುರಂ: ಗೂಂಡಾ ಸಂಘಗಳೊಂದಿಗೆ ಸಂಪರ್ಕಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಡಿವೈಎಸ್ಪಿಗಳನ್ನು ಮರುಸೇರ್ಪಡೆ ಮಾಡಲಾಗಿದೆ. ಡಿವೈಎಸ್ಪಿಗಳಾದ ಪ್ರಸಾದ್ ಮತ್ತು ಜಾನ್ಸನ್ ಅವರನ್ನು ಪುನಃ ನೇಮಿಸಲಾಯಿತು.
ಈ ಅಧಿಕಾರಿಗಳನ್ನು ಕಳೆದ ವರ್ಷ ಜನವರಿಯಲ್ಲಿ ಅಮಾನತುಗೊಳಿಸಲಾಗಿತ್ತು. ಪಾತೂರ್ ಗ್ಯಾಂಗ್ ದಾಳಿಯ ನಂತರ ಈ ಪೋಲೀಸರು ಗ್ಯಾಂಗ್ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ದರೋಡೆಕೋರರ ಜೊತೆ ಮದ್ಯಪಾನ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಇಲಾಖಾ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಅಧಿಕಾರಿಗಳನ್ನು ಪುನಃ ನೇಮಿಸಲಾಯಿತು. ಡಿವೈಎಸ್ಪಿ ಪ್ರಸಾದ್ ಅವರ ಒಂದು ಇಂಕ್ರಿಮೆಂಟ್ ಮತ್ತು ಜಾನ್ಸನ್ ಅವರ ಎರಡು ಇಂಕ್ರಿಮೆಂಟ್ ರದ್ದಾಗಿದೆ.