ಮುಳ್ಳೇರಿಯ: ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ಮುಳ್ಳೇರಿಯದ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ವಾಚನಾಲಯದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಅವರು ನಿವೃತ್ತ ಮುಖ್ಯೋಪಾಧ್ಯಾಯ ಕುಂಡಲ ವಿಷ್ಣು ಆಚಾರ್ಯ ಅವರನ್ನು ಸನ್ಮಾನಿಸಿದರು. ಚಂದ್ರನ್ ಮೊಟ್ಟಮ್ಮಲ್, ಕೆ.ಕೆ.ಮೋಹನನ್. ಕೆ.ಗೋವಿಂದನ್, ರಂಜಿತ್ ಕೆ.ಕೆ ಮತ್ತು ಎ.ಕೆ.ಬಾಲಚಂದ್ರನ್ ಮಾಸ್ತರ್ ಉಪಸ್ಥಿತರಿದ್ದರು.