HEALTH TIPS

ಕೆಲವರು ಕಣ್ಣು ಮುಚ್ಚಿ ಮೌನವಾದರು: ಡಬ್ಲ್ಯುಸಿಸಿ ಸಂಸ್ಥಾಪಕ ಸದಸ್ಯೆ ಅಂಜಲಿ ಮೆನನ್

            ಕೊಟ್ಟಾಯಂ: ಸಿನಿಮಾದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿರುವ ತಮ್ಮ ಸಹೋದ್ಯೋಗಿಗಳ ವಿರುದ್ಧ ಡಬ್ಲ್ಯುಸಿಸಿ ಸಂಸ್ಥಾಪಕ ಸದಸ್ಯೆ ಹಾಗೂ ನಿರ್ದೇಶಕಿ ಅಂಜಲಿ ಮೆನನ್ ವಾಗ್ದಾಳಿ ನಡೆಸಿದ್ದಾರೆ.

           ಚಿತ್ರ ರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವವರು ಕಣ್ಣುಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಂಜಲಿ ಹೇಳಿದ್ದಾರೆ. ಒಂದು ಮಾಧ್ಯಮದಲ್ಲಿ ಬರೆದ ಲೇಖನದಲ್ಲಿ, ಅವರು ಕಣ್ಣು ಮುಚ್ಚಿದಾಗ ಇತರರು ಅದೇ ಕತ್ತಲೆಯಿಂದ ಹೊರಬರಬೇಕು ಎಂಬ ಆಜ್ಞೆಯೇ ಅಥವಾ ವಾಸ್ತವವನ್ನು ಒಪ್ಪಿಕೊಳ್ಳಲು ತೊಂದರೆಯೇ ಎಂದು ಕೇಳಿರುವರು. 

             ಹೇಮಾ ಸಮಿತಿ ವರದಿ ಬಂದಾಗ ಬಹುತೇಕರು ಮೌನ ವಹಿಸಿದ್ದರು. ಏನಾದರೂ ಹೇಳಿದರೆ ತೊಂದರೆ ಕೊಡುವವರ ಚಿತ್ರಣ ಸಿಗುತ್ತದೆ ಎಂಬ ಭಯ. ಇಂಡಸ್ಟ್ರಿ, ಅಭಿಮಾನಿಗಳ ಗೌರವ ಪಡೆಯುವವರಿಗೂ ಇದು ಬಾಧೆ ಇಲ್ಲ ಎಂದುಕೊಂಡು ದೂರ ಉಳಿದು ದೂಷಿಸುತ್ತಾರೆ. ಅವಾಚ್ಯ ಪದಗಳೆಲ್ಲವೂ ತೊಂದರೆ ಕೊಡುವವರಿಗೆ ಗೊಬ್ಬರವಾಗುತ್ತದೆ ಎಂದು ತಿಳಿಸಿದರು.

              ಚಲನಚಿತ್ರ ಸೆಟ್‍ಗಳಲ್ಲಿರುವ ಎಲ್ಲಾ ಕೆಲಸಗಾರರಿಗೆ ಸಮಾನ ಹಕ್ಕುಗಳು, ಕಾನೂನುಗಳು ಅಥವಾ ಒಪ್ಪಂದಗಳಿಲ್ಲ. ಹಲವೆಡೆ ಮೇಲು-ಕೀಳುಗಳ ಅಧಿಕಾರ ರಾಜಕಾರಣ ಇದೆಯೆಂದು ಅವರು ಬೊಟ್ಟುಮಾಡಿರುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries