HEALTH TIPS

ಪತ್ರಕರ್ತರಿಗೆ ಓಣಂಕಿಟ್ ವಿತರಣೆ

        ಕುಂಬಳೆ: ಕೇರಳ ಜರ್ನಲಿಸ್ಟ್ ಯೂನಿಯನ್ ಕುಂಬಳೆ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಸದಸ್ಯ ಪತ್ರಕರ್ತರಿಗೆ ಓಣಂ ಕೊಡಿ(ಕಿಟ್) ವಿತರಿಸಲಾಯಿತು.

         ಕೇರಳ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಅವರು ಸ್ಕೈಲರ್ ವಸ್ತ್ರಾಲಯದ ಮಾಲಕ ಅಶ್ರಫ್ ಅವರಿಂದ ಓಣಂಕೊಡಿ ಸ್ವೀಕರಿಸಿದರು. ಬಳಿಕ ಕುಂಬಳೆ ಪ್ರೆಸ್ ಪೋರಂ ಹಾಗೂ ಕುಂಬಳೆ ವಲಯದ ಪತ್ರಕರ್ತರ ಸಂಘದ ಕಾರ್ಯಕರ್ತರಾದ ಸುಮಾರು 15 ಮಂದಿಗೆ ಓಣಂಕೊಡಿ ವಿತರಿಸಲಾಯಿತು.

          ಪತ್ರಕರ್ತರಾದ ಅಬ್ದುಲ್ ಲತೀಫ್ ಕುಂಬಳೆ, ಅಬ್ದುಲ್ಲ ಕುಂಬಳೆ, ಅಶ್ರಫ್, ಧನರಾಜ್ ಐಲ, ಕೆ.ಎಂ.ಎ. ಸತ್ತಾರ್, ಐ.ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries