ಬದಿಯಡ್ಕ: ಮಾರ್ಪನಡ್ಕದಲ್ಲಿ ಓಣಂ ದಿನಾಚರಣೆ ಹಾಗೂ ಮಾತಾ ನೃತ್ಯ ಕುಣಿತ ಭಜನಾ ಸಂಘದ ದ್ವಿತೀಯ ವಾರ್ಷಿಕೋತ್ಸವವು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ಜಯರಾಜ್ ಕುಣಿಕುಳ್ಳಾಯ ಉದ್ಘಾಕ್ತಿದು. ಚಂದ್ರಶೇಖರ, ಕುಣಿತ ಭಜನೆಯ ನೃತ್ಯಗುರು ವಿಶ್ವನಾಥ ಬಲವತಂಡ್ಕ ಉಪಸ್ಥಿತರಿದ್ದರು. ಬಳಿಕ ಕುಣಿತ ಭಜನೆ, ಹೂರಂಗೋಲಿ, ಮಡಕೆ ಒಡೆಯುವಂತಹ ವಿವಿಧ ಸ್ಪರ್ಧೆಗಳು ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉದಯ ಕುಮಾರ್ ಅಧ್ಯಕ್ಷತೆ ವಹಿಸಿದರು. ಆರಂಭದಲ್ಲಿ ಕೃಷ್ಣ ನಾಯ್ಕ್ ಸ್ವಾಗತಿಸಿ, ರವಿಕಲ ಶಿಬು ವಂದಿಸಿದರು. ಚೇತನಾ ಕಾರ್ಯಕ್ರಮ ನಿರೂಪಿಸಿದರು.