HEALTH TIPS

ನನಗೆ ನೀಡಿದ ಉಡುಗೊರೆಗಳ ಹರಾಜಿನಲ್ಲಿ ಪಾಲ್ಗೊಳ್ಳಿ: ಪ್ರಧಾನಿ ಮೋದಿ ಕರೆ

 ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವಿಧ ಕಾರ್ಯಕ್ರಮಗಳಲ್ಲಿ ನೀಡಲಾದ ಉಡುಗೊರೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಈ ಉಡುಗೊರೆಗಳ ಹರಾಜಿನ ಬಳಿಕ ಸಂಗ್ರಹವಾದ ಹಣವನ್ನು ಗಂಗಾ ನದಿಯನ್ನು ಸ್ವಚ್ಛಗೊಳಿಸುವ 'ನಮಾಮಿ ಗಂಗೆ' ಉಪಕ್ರಮಕ್ಕೆ ಬಳಸಲಾಗುತ್ತದೆ.


ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಪ್ರತಿ ವರ್ಷ, ನಾನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ವೀಕರಿಸುವ ವಿವಿಧ ಸ್ಮರಣಿಕೆಗಳನ್ನು ಹರಾಜು ಹಾಕುತ್ತೇನೆ. ಹರಾಜಿನ ಆದಾಯವು 'ನಮಾಮಿ ಗಂಗೆ' ಉಪಕ್ರಮಕ್ಕೆ ಹೋಗುತ್ತದೆ. ಈ ವರ್ಷದ ಹರಾಜು ಪ್ರಾರಂಭವಾಗಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಿಮಗೆ ಆಸಕ್ತಿದಾಯಕವೆಂದು ತೋರುವ ಸ್ಮರಣಿಕೆಗಳನ್ನು ಪಡೆಯಲು ಹರಾಜಿನಲ್ಲಿ ಪಾಲ್ಗೊಳ್ಳಿ' ಎಂದಿದ್ದಾರೆ.

'ನಮಾಮಿ ಗಂಗೆ' ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಜಾರಿಗೆ ತರಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries