ಮಧೂರು : ಪರಕ್ಕಿಲ ತರುಣ ಕಲಾ ವೃಂದ ಉಳಿಯ ಇವರ ನೇತೃತ್ವದಲ್ಲಿ, ಸಂಘದ ಸದಸ್ಯೆಯರಿಂದ ಶನಿವಾರ 'ಓಣಂ ಸಂಭ್ರಮ' ಕಾರ್ಯಕ್ರಮ ತರುಣಕಲಾವೃಂದದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪ್ರಯುಕ್ತ ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆಯೊಂದಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಯಿತು.
ಅಪರಾಹ್ನ 4 ಕ್ಕೆ ನಡೆದ ಸಭಾ ಕಾರ್ಯಕ್ರಮದಲ್ಲಿ ತರುಣ ಕಲಾವೃಂದದ ಅಧ್ಯಕ್ಷ ಸುರೇಶ್ ಯು ಆರ್ ಅಧ್ಯಕ್ಷತೆ ವಹಿಸಿದ್ದರು.ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಉದ್ಘಾಟಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ, ಆಶೀರ್ವಚನ ನೀಡಿದರು. ಉಪಾಧ್ಯಕ್ಷ ಸಂತೋಷ್ ಆರ್ ಗಟ್ಟಿ ಶುಭ ಹಾರೈಸುತ್ತಾ ತರುಣ ಕಲಾವೃಂದದ ಸಹಯೋಗದೊಂದಿಗೆ ,ತರುಣ ಮಹಿಳಾ ಸಮಿತಿಯ ನೇತೃತ್ವದಲ್ಲಿ ನಡೆದ ಓಣಂ ಆಚರಣೆಯನ್ನು ಪ್ರಶಂಸಿದರು.
ಆಯೋಜಿಸಲಾಗಿದ್ದ ಕಲಾ - ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಎಸ್ ಎಸ್ ಎಲ್ ಸಿ, ಪ್ಲಸ್ ಟು, ಪದವಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು.
ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ ಶುಭಹಾರೈಸಿದರು. ಸಭಿಕರ ಪರವಾಗಿ ದೀಪಾ ಕಿರಣ್, ಕಲಾ ಮತ್ತು ಕ್ರೀಡಾ ಕಾರ್ಯದರ್ಶಿ ಶರಣ್ಯಾ ನಾರಾಯಣನ್, ಕಾರ್ಯಕಾರಿ ಸಮಿತಿಯ ಸದಸ್ಯೆಯರು ಮೃದುಲಾ ಸುರೇಶ್ ,ಜಯಲಕ್ಷ್ಮಿ ರಾಜೇಶ್ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಮೀರಾ ಉಳಿಯ ಇವರ ನೇತೃತ್ವದ, ನಳಿನಾಕ್ಷಿ , ಸುಮತಿ , ಚಿತ್ರಾ, ವಿನಯಾ ಇವರನ್ನೊಳಗೊಂಡ ತಂಡ ಮೊದಲ ಸ್ಥಾನವನ್ನು ಗಳಿಸಿತು.
ಸಂಘಟನಾ ಕಾರ್ಯದರ್ಶಿ ಪದ್ಮರಾಜ ಪರಕ್ಕಿಲ ಸ್ವಾಗತಿಸಿ ,ಬಾಲಕೃಷ್ಣ ಉಳಿಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.