HEALTH TIPS

ಓಣಂಗೆ ಬಜೆಟ್ ಸ್ನೇಹಿ ಪ್ರವಾಸ ಪ್ಯಾಕೇಜ್ ತರಲಿರುವ ಕೆಎಸ್‍ಆರ್‍ಟಿಸಿ

ತಿರುವನಂತಪುರಂ: ಓಣಂ ರಜಾ ಕಾಲವನ್ನು ಉತ್ಸಾಹದಿಂದ ಆಚರಿಸಲು ಕೆಎಸ್‍ಆರ್‍ಟಿಸಿ ಬಜೆಟ್ ಸ್ನೇಹಿ ಪ್ಯಾಕೇಜ್ ಸ|ಏವೆ ನಡೆಸಲು ಮುಂದಾಗಿದೆ. ಕೆಎಸ್‍ಆರ್‍ಟಿಸಿ ಈ ಬಾರಿಯ ಓಣಂಗೆ ನೆಲ, ಸರೋವರ, ಸಮುದ್ರದಲ್ಲಿ ಸಂಭ್ರಮಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಕೆಎಸ್‍ಆರ್‍ಟಿಸಿಯ ಬಜೆಟ್ ಟೂರಿಸಂ ಸೆಲ್ ರಾಜ್ಯ ಜಲ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಬಸ್-ಬೋಟ್ ಕಾಂಬೋ ಟೂರ್‍ಗಳನ್ನು ಪರಿಚಯಿಸುತ್ತಿದೆ.

ಕೆಎಸ್‍ಆರ್‍ಟಿಸಿಯ ವಿಶೇಷ ಬಸ್‍ಗಳ ಮೂಲಕ ಐμÁರಾಮಿ ದೋಣಿಗಳಲ್ಲಿ ಸುಂದರವಾದ ಹಿನ್ನೀರಿನ ವಿಹಾರವನ್ನು ಆನಂದಿಸುವ ರೀತಿಯಲ್ಲಿ ಪ್ರವಾಸ ಪ್ಯಾಕೇಜ್‍ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರವಾಸದ ಪ್ಯಾಕೇಜ್ ಅನ್ನು ಮೂರು ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ.

ಕೆಎಸ್‍ಆರ್‍ಟಿಸಿ ಟೂರ್ ಪ್ಯಾಕೇಜ್‍ಗಳನ್ನು ಅಲಪ್ಪುಳದಲ್ಲಿ ವೇಗ-1 ಮತ್ತು ಸೀ ಕುಟ್ಟನಾಡ್ ಬೋಟ್‍ಗಳು, ಕೊಲ್ಲಂನಲ್ಲಿ ಸೀ ಅಷ್ಟಮುಡಿ ದೋಣಿ ಮತ್ತು ಎರ್ನಾಕುಳಂನಲ್ಲಿ ಇಂದ್ರ ಬೋಟ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಓಣಂ ಆಚರಣೆಗಾಗಿ ಕಣ್ಣೂರು ಪರಶ್ಶಿನಿನಕಡವಲ್ಲಿ ದೋಣಿಯ ಮೇಲಿರುವ ಡಾಕ್‍ನಿಂದ ಪ್ರಯಾಣಿಸಬಹುದಾದ ವಿಶೇಷ ಪ್ಯಾಕೇಜ್ ಅನ್ನು ಸಿದ್ಧಪಡಿಸಲಾಗಿದೆ.

ಬಜೆಟ್ ಟೂರಿಸಂ ಸೆಲ್ ಕೆಎಸ್‍ಆರ್‍ಟಿಸಿಯ ವಿವಿಧ ಡಿಪೋಗಳಿಂದ ಸುಮಾರು 250 ಪ್ರವಾಸ ಪ್ಯಾಕೇಜ್‍ಗಳನ್ನು ಸಿದ್ಧಪಡಿಸಿದೆ. ಕೆಸ್ ಆರ್ ಟಿಸಿ ವಯನಾಡ್, ಮುನ್ನಾರ್, ಗವಿ, ಪೆÇನ್ಮುಡಿ ಮುಂತಾದ ಸ್ಥಳಗಳಿಗೆ ಅರಣ್ಯ ಚಾರಣವನ್ನು ಸಹ ಏರ್ಪಡಿಸಿದೆ.

*ಬುಕಿಂಗ್ ಮತ್ತು ಹೆಚ್ಚಿನ ವಿವರಗಳಿಗಾಗಿ -*

*ಜಿಲ್ಲಾ ಕೋ-ಆರ್ಡಿನೇಟರ್, ಬಜೆಟ್ ಟೂರಿಸಂ ಸೆಲ್,

ತಿರುವನಂತಪುರಂ

ಜಯಕುಮಾರ್ 9447479789

ಕೊಲ್ಲಂ

ಮೋನೈ ಜೆ ಕೃಷ್ಣ 974796768

ಪತ್ತನಂತಿಟ್ಟ

ಸಂತೋಷ್ ಕುಮಾರ್ ಸಿ 9744348037

ಆಲಪ್ಪುಳ

ಶಫೀಕ್ 9846475874

ಎರ್ನಾಕುಳಂ ಮತ್ತು ಕೊಟ್ಟಾಯಂ

ಪ್ರಶಾಂತ್ ವಿ.ಪಿ 9447223212

ಇಡುಕ್ಕಿ

ರಾಜೀವ್ ಎನ್ಆರ್ 9446525773

ತ್ರಿಶೂರ್

ಡೊಮಿನಿಕ್ ಪಿರೇರಾ 9747557737

ಪಾಲಕ್ಕಾಡ್

ಇಂದುಲಾಲ್ ಸಿ 9495450394

ಮಲಪ್ಪುರಂ

ಶಿಜಿಲ್ ಎಸ್ 8590166459

ಕೋಝಿಕ್ಕೋಡ್

ಸೂರಜ್ ಟಿ 9544477954

ವಯನಾಡ್

ರೈಜು ಐಆರ್ 8921185429

ಕಣ್ಣೂರು ಮತ್ತು ಕಾಸರಗೋಡು

ತನೀರ್ 9526863675



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries