ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನಕ್ಕೆ ನುಗ್ಗಿ ಕಾಣಿಕೆ ಹುಂಡಿ ಕಳವುಗೈದಿದ್ದ ಯುವಕನನ್ನು ಬಂಧಿಸಲಾಗಿದೆ. ಸನ್ನಿಧಾನಂನಲ್ಲಿ ಕಾಣಿಕೆ ಹುಂಡಿ ಪುಡಿಗಟ್ಟಿ ಹಣ ದೋಚಿದ್ದ ತಮಿಳುನಾಡಿನ ಕಳ್ಳನನ್ನು ಬಂಧಿಸಲಾಗಿದೆ.
ತೆಂಕಾಶಿ ಕೀಲಸುರಂದ ಮೂಲದ ಸುರೇಶ್ ಬಂಧಿತ ಆರೋಪಿ. ಆಗಸ್ಟ್ 20 ರಂದು ಸಿಂಹ ಮಾಸ ಪೂಜೆ ವೇಳೆ ಕಾಣಿಕೆ ಹುಂಡಿಯನ್ನು ಧ್ವಂಸಗೊಳಿಸಲಾಗಿತ್ತು. ದೇವಸ್ಥಾನ ಮುಚ್ಚಿದ ಬಳಿಕ ಕಳ್ಳತನ ನಡೆದಿರುವುದು ದೇವಸ್ವಂ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ನೌಕರನೆಂಬ ನೆಪದಲ್ಲಿ ಕಳ್ಳ ಆಗಮಿಸಿದ್ದ.
ಪಂಬಾ ಮತ್ತು ಸನ್ನಿಧಾನಂನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿತ್ತು. ಪೋಲೀಸರು ವಿಶೇಷ ತಂಡ ರಚಿಸಿ ತನಿಖೆಯನ್ನು ತೀವ್ರಗೊಳಿಸಿದ್ದರು. ಕನ್ಯಾ ಮಾಸ ಪೂಜೆಗೆ ದೇವಾಲಯ ತೆರೆದಾಗ ಪೋಲೀಸರು ಸನ್ನಿಧಾನಕ್ಕೆ ಕೆಲಸಕ್ಕೆ ಬಂದವರನ್ನೆಲ್ಲ ಗೌಪ್ಯವಾಗಿ ಗಮನಿಸುತ್ತಿದ್ದರು. ಹೀಗಾಗಿಯೇ ಕಳ್ಳನ ಸುಳಿವು ಲಭಿಸಿತು. ವರ್ಷಗಳಿಂದ ಪ್ರತಿ ತಿಂಗಳು ಶಬರಿಮಲೆಗೆ ಬರುತ್ತಿದ್ದ ಆರೋಪಿ ಈ ತಿಂಗಳು ಶಬರಿಮಲೆಗೆ ಬಂದಿಲ್ಲ ಎಂದು ಪೋಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಬಂಧಿಸಿದರು.