HEALTH TIPS

ಓಣಂ ಸ್ಪರ್ಧೆ: ಇಡ್ಲಿ ಗಂಟಲಿಗೆ ಸಿಲುಕಿ ಮಧ್ಯವಯಸ್ಕನ ಸಾವು

ಪಾಲಕ್ಕಾಡ್: ಓಣಂ ಹಬ್ಬದ ಅಂಗವಾಗಿ ಆಹಾರ ಸೇವಿಸುವ  ಸ್ಪರ್ಧೆಯ ವೇಳೆ ಇಡ್ಲಿ ಗಂಟಲಿಗೆ ಸಿಲುಕಿ ಮಧ್ಯವಯಸ್ಕರೊಬ್ಬರು ಮೃತಪಟ್ಟಿದ್ದಾರೆ. ಕಂಚಿಕೋಡು ಮೂಲದ ಬಿ ಸುರೇಶ್ (50) ಮೃತರು. ಓಣಂ ನಿಮಿತ್ತ ಏರ್ಪಡಿಸಲಾಗಿದ್ದ ಇಡ್ಲಿ ಉಣಿಸುವ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ.

ಹೆಚ್ಚು ಇಡ್ಲಿಗಳನ್ನು ಸೇವಿಸಲು ಸ್ಪರ್ಧಾತ್ಮಕವಾಗಿ ಪ್ರಯತ್ನಿಸಿದಾಗ, ಆಹಾರವು ಗಂಟಲಿಗೆ ಸಿಲುಕಿ ಸಾವು ಸಂಭವಿಸಿದೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಕಂಚಿಕೋಡು ಭಾಗದ ಯುವ ಸಮೂಹದಿಂದ ಇಡ್ಲಿ ಸೇವಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಎರಡು ಹಂತದ ಸ್ಪರ್ಧೆ ಮುಗಿದು ಮೂರನೇ ಹಂತದ ಸ್ಪರ್ಧೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಇಡ್ಲಿ ಸೇವಿಸುವಾಗ ಸುರೇಶ್ ಗೆ ಉಸಿರಾಟದ ಸಮಸ್ಯೆ ಮೊದಲು ಕಂಡುಬಂತು.  ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries