HEALTH TIPS

ಚಿಗುರುಪಾದೆಯಲ್ಲಿ ರಂಜಿಸಿದ ಗುರುನರಸಿಂಹ ಯಕ್ಷ ಬಳಗದ ಸುಧನ್ವಾರ್ಜುನ

ಮಂಜೇಶ್ವರ:  ಮೀಯಪದವು ಚಿಗುರುಪಾದೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ಸಿಂಹಮಾಸ ಕೊನೆಯ ಶನಿವಾರ ಬಲಿವಾಡು ಕೂಟನಿಮಿತ್ತ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಸುಧನ್ವಾರ್ಜುನ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಸೇವಾರೂಪದಿಂದ ಜರಗಿ ಜನಮನ ರಂಜಿಸಿತು.

ಹಿಮ್ಮೇಳದಲ್ಲಿ ಭಾಗವತರು ರಾಮಪ್ರಸಾದ ಮಯ್ಯ ಕೂಡ್ಲು, ವಿಘ್ನೇಶ ಕಾರಂತ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಅಕ್ಷಯ ರಾವ್ ವಿಟ್ಲ, ವಿಕ್ರಂ ಮಯ್ಯ ಪೈವಳಿಕೆ, ಚಕ್ರತಾಳದಲ್ಲಿ ಗೌತಮ ನಾವಡ ಮಜಿಬೈಲು ಭಾಗವಹಿಸಿದ್ದು ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇದಮೂರ್ತಿ ಗಣೇಶ ನಾವಡ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ವೀರವೆಂಕಟ ಹಂದೆ, ಗುರುಪ್ರಸಾದ ಹೊಳ್ಳ ತಿಂಬರ, ಪ್ರಶಾಂತ ಹೊಳ್ಳ ಬಾಯಾರು, ಗುರುರಾಜ ಹೊಳ್ಳ ಬಾಯಾರು, ವಿಘ್ನೇಶ ಕಾರಂತ ಶಿರಿಯ ಭಾಗವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries