HEALTH TIPS

ವಯನಾಡ್‍ಗಾಗಿ ಕೈಜೋಡಿಸಿದ ಸಾಮಾಜಿಕ ಮಾಧ್ಯಮ ಪ್ರಭಾವಿಗಳು: ಪ್ರವಾಸೋದ್ಯಮ ಇಲಾಖೆಯ 'ಮೈ ಕೇರಳ ಈಸ್ ಆಲ್ವೇಸ್ ಬ್ಯೂಟಿಫುಲ್' ಅಭಿಯಾನದ ವಿಡಿಯೋ ಇಂದು ಬಿಡುಗಡೆ

               ತಿರುವನಂತಪುರಂ: ಭೂಕುಸಿತ ಪೀಡಿತ ವಯನಾಡಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಕೈಜೋಡಿಸಿದ್ದಾರೆ.

                ಇದು ಕೇರಳ ಪ್ರವಾಸೋದ್ಯಮದ ಹೊಸ ಅಭಿಯಾನದ ಒಂದು ಭಾಗವಾಗಿದೆ 'ಎಂಡೆ ಕೇರಳಂ, ಅಂಕು ಸುಂದರಂ' ಇದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದ ಟೈಟಲ್ ಆಗಿ ಹೊರಬಿದ್ದಿದೆ.

                   ಅಭಿಯಾನದ ಅಧಿಕೃತ ವಿಡಿಯೋವನ್ನು ಪ್ರವಾಸೋದ್ಯಮ ಸಚಿವ ಪಿಎ ಮುಹಮ್ಮದ್ ರಿಯಾಝ್ ಇಂದು ಬಿಡುಗಡೆ ಮಾಡಲಿದ್ದಾರೆ

                     ಸಾಮಾಜಿಕ ಮಾಧ್ಯಮದ ಮೂಲಕ ಪ್ರಸಾರಗೊಳಿಸಿ ಸಂವಹನ ಬೆಳೆಸುವ ಲಕ್ಷ್ಯವಿರಿಸಲಾಗಿದೆ. ರಾಜ್ಯದ ಒಳಗೆ ಮತ್ತು ಹೊರಗೆ ಅಪಾರ ಅನುಯಾಯಿಗಳನ್ನು ಹೊಂದಿರುವ ಸುಮಾರು 30 ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಕಾರ್ಯಕ್ರಮದ ಭಾಗವಾಗಲಿದ್ದಾರೆ. ವಯನಾಡ್‍ನ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಪ್ರಭಾವಿಗಳು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ರಮಣೀಯ ಭೂದೃಶ್ಯ ಮತ್ತು ಜಿಲ್ಲೆಯ ಪ್ರಮುಖ ಸ್ಥಳಗಳನ್ನು ಒಳಗೊಂಡ ವೀಡಿಯೊ ವಿಷಯವನ್ನು ಪೋಸ್ಟ್ ಮಾಡುತ್ತಾರೆ.

                  ಚುರಲ್ಮಲಾ ಭೂಕುಸಿತ ದುರಂತದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರವು ವಯನಾಡಿನ ಪ್ರವಾಸೋದ್ಯಮ-ಆತಿಥ್ಯ ಉದ್ಯಮದ ಮೇಲೆ ಪರಿಣಾಮ ಬೀರಿದ್ದು,  ಹೋಟೆಲ್ ಬುಕಿಂಗ್ ಸೇರಿದಂತೆ ಪ್ರವಾಸೋದ್ಯಮ ಕುಸಿದಿದೆ. 

         ವಯನಾಡ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಸಚಿವ ರಿಯಾಜ್ ಹೇಳಿದ್ದಾರೆ. ಜಿಲ್ಲೆಯ ಒಂದು ಸಣ್ಣ ಭಾಗದಲ್ಲಿ ಮಾತ್ರ ಭೂಕುಸಿತ ಸಂಭವಿಸಿದೆ. ಆದರೆ ಅನೇಕರು ವಯನಾಡ್ ದುರಂತ ಎಂದು ಕರೆಯುತ್ತಾರೆ, ಇದು ಜಿಲ್ಲೆಯ ಸಂಪೂರ್ಣ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.  ಅನೇಕರು ಕಳವಳದಿಂದಾಗಿ ಚುರಲ್ಮಲಾದಿಂದ ದೂರವಿರುವ ಸ್ಥಳಗಳಿಗೂ ತಮ್ಮ ಪ್ರವಾಸಗಳನ್ನು ರದ್ದುಗೊಳಿಸಿದರು. ಇದರಿಂದ ಹಲವು ಕುಟುಂಬಗಳ ಜೀವನೋಪಾಯಕ್ಕೆ ತೊಂದರೆಯಾಗಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಯನಾಡಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಯೋಜನೆ ರೂಪಿಸಿ ಅನುμÁ್ಠನಗೊಳಿಸಲಾಯಿತು. ಪರಿಣಾಮವಾಗಿ, ವಯನಾಡ್ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿತು. ವಯನಾಡ್ ಪ್ರಮುಖ ತಾಣವಾಗಿ ಬೆಳೆದು ವಾರಾಂತ್ಯದಲ್ಲಿ ವಿಪರೀತ ರಶ್ ನಿಂದಾಗಿ ಹೋಟೆಲ್ ಬುಕ್ಕಿಂಗ್ ಕೂಡ ಸಿಗದ ಪರಿಸ್ಥಿತಿ ಇತ್ತು. ಕೋವಿಡ್ ನಂತರ 'ಸುರಕ್ಷಿತ ಕೇರಳ' ಅಭಿಯಾನದಲ್ಲಿ ವಯನಾಡ್ ಅನ್ನು ಮೊದಲು ಪರಿಗಣಿಸಲಾಗಿದೆ. ಆದರೆ ಚುರಲ್ಮಲಾ ದುರಂತದ ನಂತರ, ಅನೇಕ ಸುಳ್ಳು ಪ್ರಚಾರಗಳಿಂದ ಈ ಮೇಲುಗೈ ಕಳೆದುಹೋಯಿತು. ‘ಎಂತೆ ಕೇರಳಂ ಏಕ ಸುಂದರಂ’ ಅಭಿಯಾನವು ರಾಜ್ಯಾದ್ಯಂತ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries