HEALTH TIPS

ಮಕ್ಕಳನ್ನು ಪ್ರತಿಭಟನೆಗಳಲ್ಲಿ ಪಾಲ್ಗೊಳಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು: ಹೈಕೋರ್ಟ್

ಕೊಚ್ಚಿ: ಪೋಷಕರು ಹತ್ತು ವರ್ಷದೊಳಗಿನ ಮಕ್ಕಳನ್ನು ಪ್ರತಿಭಟನಾ ಪ್ರದರ್ಶನ, ಸತ್ಯಾಗ್ರಹ ಅಥವಾ ಧರಣಿಗಳಲ್ಲಿ ಭಾಗವಹಿಸಲು ಕರೆತಂದರೆ ಕಾನೂನು ಪಾಲಕರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ತಿರುವನಂತಪುರದಲ್ಲಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಪಿ.ವಿ. ಕುಂಞÂ್ಞ ಕೃಷ್ಣನ್ ಈ ಸೂಚನೆ ನೀಡಿದರು. 2016 ರಲ್ಲಿ ಎಸ್‍ಎಟಿ ಆಸ್ಪತ್ರೆಯಲ್ಲಿ ಮತ್ತೊಂದು ಮಗುವಿನ ಸಾವಿಗೆ ಕಾರಣವಾದ ವೈದ್ಯಕೀಯ ನಿರ್ಲಕ್ಷ್ಯದ ನಂತರ ಸರ್ಕಾರದಿಂದ ಆರ್ಥಿಕ ನೆರವು ಕೋರಿ ಮೂರು ವರ್ಷದ ಮಗುವನ್ನು ಸೆಕ್ರೆಟರಿಯೇಟ್‍ಗೆ ಕರೆದೊಯ್ದ ನಂತರ ಈ ಪ್ರಕರಣ ನಡೆದಿದೆ.

59 ದಿನಗಳ ಧರಣಿ ವೇಳೆ ಉರಿ ಬಿಸಿಲಿನಲ್ಲಿ ಫುಟ್ ಪಾತ್ ಮೇಲೆ ಮಗುವನ್ನು ಕಂಡ ಪೋಲೀಸರು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ದಂಪತಿ ವಿರುದ್ಧದ ಪ್ರಕರಣವನ್ನು ಪೀಠ ರದ್ದುಗೊಳಿಸಿದ್ದರೂ, ಕಾನೂನು ಪೂರ್ವಭಾವಿಯಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ತಾಕೀತು ಮಾಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries