HEALTH TIPS

KSRTC ಡ್ರೈವಿಂಗ್ ಶಾಲೆಗಳನ್ನು ವಿಸ್ತರಿಸಲು ಕ್ರಮ: ಸಚಿವ ಗಣೇಶ್ ಕುಮಾರ್

ತಿರುವನಂತಪುರ: ಕೆಎಸ್‍ಆರ್‍ಟಿಸಿ ರಾಜ್ಯಾದ್ಯಂತ ಮೊದಲ ಹಂತದಲ್ಲಿ 11 ಸ್ಥಳಗಳಲ್ಲಿ ಡ್ರೈವಿಂಗ್ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಂಡಿದೆ ಎಂದು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ತಿಳಿಸಿದರು.

ಕೆಎಸ್‍ಆರ್‍ಟಿಸಿ ಡ್ರೈವಿಂಗ್ ಸ್ಕೂಲ್‍ನಲ್ಲಿ ತರಬೇತಿ ಪೂರ್ಣಗೊಳಿಸಿ ಪರವಾನಗಿ ಪಡೆದ ಮೊದಲ ಬ್ಯಾಚ್‍ಗೆ ಪರವಾನಗಿ ವಿತರಣೆ ಮತ್ತು ಕೆಎಸ್‍ಆರ್‍ಟಿಸಿ ಘಟಕಗಳಲ್ಲಿ ಪ್ರಾರಂಭವಾಗುವ ವೈದ್ಯಕೀಯ ಸೇವಾ ವ್ಯವಸ್ಥೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ತಿರುವನಂತಪುರ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 37 ಜನರ ಮೊದಲ ಬ್ಯಾಚ್‍ನಲ್ಲಿ 30 ಜನರು ಚಾಲನಾ ಪರವಾನಗಿ ಪಡೆದಿದ್ದಾರೆ. ಕೈಗೆಟಕುವ ದರದಲ್ಲಿ ವೈಜ್ಞಾನಿಕ ಚಾಲನಾ ತರಬೇತಿ ನೀಡುವ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ಚಾಲನಾ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ. ಈ ಉದ್ದೇಶಕ್ಕಾಗಿ ರಾಜ್ಯದ ವಿವಿಧೆಡೆ ಕೆಎಸ್‍ಆರ್‍ಟಿಸಿ ಚಾಲನಾ ತರಬೇತಿ ಕೇಂದ್ರಗಳ ರಾಜ್ಯಮಟ್ಟದ ಉದ್ಘಾಟನೆಯನ್ನು ಇದೇ ಜೂನ್ 26ರಂದು ಆನ್‍ಲೈನ್‍ನಲ್ಲಿ ಮಾಡಲಾಗಿತ್ತು. 

ಮಹಿಳೆಯರಿಗೆ ತರಬೇತಿ ನೀಡಲು ವಿಶೇಷ ತರಬೇತಿ ಪಡೆದ ಮಹಿಳಾ ಬೋಧಕರನ್ನು ನೇಮಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ದರದಲ್ಲಿ ಸಡಿಲಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ.

ಕೆ.ಎಸ್.ಆರ್.ಟಿ.ಸಿ ಡ್ರೈವಿಂಗ್ ಶಾಲೆಗಳು ಕೈಗೆಟುಕುವ ದರದಲ್ಲಿ ಅತ್ಯುತ್ತಮ ಪ್ರಾಯೋಗಿಕ ತರಬೇತಿಯನ್ನು ನೀಡುತ್ತವೆ. ತಿರುವನಂತಪುರಂ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಆರಂಭವಾದ ಮೊದಲ ತರಬೇತಿ ಕೇಂದ್ರದಲ್ಲಿ ಇದುವರೆಗೆ ವಿವಿಧ ವಿಭಾಗಗಳಲ್ಲಿ 182 ಮಂದಿ ಪ್ರವೇಶ ಪಡೆದಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries