HEALTH TIPS

ಲಡ್ಡು ವಿವಾದ: ನಾಯ್ಡು 'ಪಾಪ'ಕ್ಕೆ YSRCP ಕಾರ್ಯಕರ್ತರಿಂದ 'ಪ್ರಾಯಶ್ಚಿತ್ತ' ಕಾರ್ಯ

         ಮರಾವತಿ: ತಿರುಪತಿ ದೇವಸ್ಥಾನದ ಪ್ರಸಾದವಾದ ಲಾಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂದು ಆರೋಪಿಸುವ ಮೂಲಕ, ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು 'ಪಾಪ' ಮಾಡಿದ್ದಾರೆ ಹಾಗೂ ಈ ಪಾಪ ಪರಿಹಾರಕ್ಕಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಶನಿವಾರ ಪ್ರಾಯಶ್ಚಿತ್ತ ವಿಧಿ ಕೈಗೊಂಡಿದ್ದರು.

          'ಮುಖ್ಯಮಂತ್ರಿ ನಾಯ್ಡು ಅವರ ತಪ್ಪಿನಿಂದಾದ ಅಪಪ್ರಚಾರ ನಿವಾರಣೆಗಾಗಿ ಪ್ರಾಯಶ್ಚಿತ್ತ ಹಾಗೂ ಕ್ಷಮಾಪಣೆ ವಿಧಿಗಳನ್ನು ಕೈಗೊಳ್ಳಬೇಕು' ಎಂದು ಪಕ್ಷದ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಕರೆ ನೀಡಿದ್ದರು.

          ಪಕ್ಷದ ಹಿರಿಯ ನಾಯಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ಅವರು ತಿರುಪತಿಯ ತಾತಯ್ಯ ಗುಂಟದಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡಿದ್ದರು.

           ಮಾಜಿ ನೀರಾವರಿ ಸಚಿವ ಅಂಬಟಿ ರಾಮ್‌ಬಾಬು, ಗುಂಟೂರಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪೂಜಾ ವಿಧಿಗಳಲ್ಲಿ ಪಾಲ್ಗೊಂಡಿದ್ದರು.

ಏಲೂರು ಜಿಲ್ಲೆಯಲ್ಲಿ ಹಮ್ಕಿಕೊಂಡಿದ್ದ ವಿಶೇಷ ಪೂಜಾ ಕಾರ್ಯಗಳಲ್ಲಿಯೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries