HEALTH TIPS

ಕೋವಿಡ್-19 ಲಸಿಕೆಯಿಂದ ಅಡ್ಡ ಪರಿಣಾಮ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

      ವದೆಹಲಿ: ಕೋವಿಡ್-19 ಲಸಿಕೆಯಿಂದ ಜನರಿಗೆ ಸಾಕಷ್ಟು ಅಡ್ಡಪರಿಣಾಮಗಳಾಗಿವೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಜಾಗೊಂಡಿದೆ.

        ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠ ಈ ಪಿಐಎಲ್‌ನ್ನು ವಜಾಗೊಳಿಸಿತು.

         ಈ ಅರ್ಜಿಯ ಪ್ರಯೋಜನ ಏನು? ಎಂದು ಪ್ರಶ್ನಿಸಿದ ಪೀಠ, ಲಸಿಕೆ ಪಡೆಯದಿದ್ದರೆ ಅದರ ಪರಿಣಾಮಗಳು ಏನು ಎಂಬುದನ್ನು ನೀವು ಬಲ್ಲಿರಾ? ನಾವು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಲು ಬಯಸುವುದಿಲ್ಲ. ಆದರೆ, ಪ್ರಚಾರ ಪಡೆಯಲು ನೀವು ಇದನ್ನು ಸಲ್ಲಿಸಿದ್ದಿರಿ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

            ಪ್ರಿಯಾ ಮಿಶ್ರಾ ಹಾಗೂ ಇತರರು, ಕೋವಿಡ್-19 ಲಸಿಕೆ ಪಡೆದವರಿಗೆ ರಕ್ತ ಹೆಪ್ಪುಗಟ್ಟುವಿಕೆ ಅಂತಹ ಅಡ್ಡಪರಿಣಾಮಗಳಾಗುತ್ತಿವೆ ಎಂದು ಪಿಐಎಲ್ ಸಲ್ಲಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries