ಕಾಸರಗೋಡು: ನಗರದ ಮೀಪುಗುರಿ ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ನವಾನ್ನ ಮಹೋತ್ಸವ ಮತ್ತು ಶ್ರೀ ಮುತ್ತಪ್ಪನ್ ವೆಳ್ಳಾಟ ಅ.26 ರಂದು ಜರುಗಲಿದೆ. ಅಂದು ಬೆಳಗ್ಗೆ 9.30ಕ್ಕೆ ಶ್ರೀ ಮುತ್ತಪ್ಪನ್ ದೈವದ ನವಾನ್ನ ಪೈಂಗುತ್ತಿ ದರ್ಶನ, 10.30ಕ್ಕೆ ಶ್ರೀ ಮುತ್ತಪ್ಪನ್ ದೈವದ ಮಲೆ ಇಳಿಸುವಿಕೆ, 11.30ಕ್ಕೆ ಶ್ರೀ ಮುತ್ತಪ್ಪನ್ ದೈವದ ಊಟ್ ವೆಳ್ಳಾಟ (ಕೋಲ), ಮಧ್ಯಾಹ್ನ 1 ಗಂಟೆಗೆ ನವಾನ್ನ ಪ್ರಸಾದ, ಸಂಜೆ 4.30ಕ್ಕೆ ಶ್ರೀ ಮುತ್ತಪ್ಪನ್ ದೈವವನ್ನು ಮಲೆ ಏರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು.