HEALTH TIPS

ಕಾಸರಗೋಡು: ಅಟೋ ರಿಕ್ಷಾ ವಶಪಡಿಸಿದ ಪೋಲೀಸರು: 55 ವರ್ಷದ ವ್ಯಕ್ತಿ ಆತ್ಮಹತ್ಯೆ

ಕಾಸರಗೋಡು: ಪೋಲೀಸರು ವಶಪಡಿಸಿಕೊಂಡ ಆಟೋ ರಿಕ್ಷಾ ಬಿಡುಗಡೆ ಮಾಡದ ಕಾರಣ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಸರಗೋಡು ಮೂಲದ ಅಬ್ದುಲ್ ಸತ್ತಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ವಿರೋಧಿಸಿ ಆಟೊರಿಕ್ಷಾ ಚಾಲಕರು ಪೋಲೀಸ್ ಠಾಣೆ ಎದುರು ಧರಣಿ ನಡೆಸಿದರು.

ಅಬ್ದುಲ್ ಸತ್ತಾರ್ ಅವರ ಕಾರನ್ನು ನೆಲ್ಲಿಕುನ್ನು ಜಂಕ್ಷನ್‍ನಲ್ಲಿ ಟ್ರಾಫಿಕ್ ಜಾಮ್ ಉಂಟು ಮಾಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೋಲೀಸರು ವಶಕ್ಕೆ ಪಡೆದಿದ್ದರು. ಆಟೋ ಬಿಡುಗಡೆ ಮಾಡುವಂತೆ ಸತ್ತಾರ್ ಹಲವು ಬಾರಿ ಪೋಲೀಸ್ ಠಾಣೆಗೆ ಹೋದರೂ ಎಸ್‍ಐ ಬಿಡಲಿಲ್ಲ ಎಂದು ಇತರ ಆಟೋ ಕಾರ್ಮಿಕರು ಹೇಳುತ್ತಾರೆ. ಸಿಟ್ಟಿನಿಂದ ಸತ್ತಾರ್ ಪ್ರಾಣ ತೆತ್ತಿದ್ದಾನೆ ಎನ್ನಲಾಗಿದೆ.

55 ವರ್ಷದ ಸತ್ತಾರ್ ರೈಲ್ವೆ ನಿಲ್ದಾಣದ ಬಳಿಯಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಆಟೋ ರಿಕ್ಷಾ ಬಿಡುಗಡೆ ಆಗದಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಟಿಪ್ಪಣಿಯನ್ನೂ ಹಂಚಿಕೊಂಡಿದ್ದರು. ಘಟನೆಯಲ್ಲಿ ಎಸ್‍ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಟೊರಿಕ್ಷಾ ಕಾರ್ಮಿಕರು ಆಗ್ರಹಿಸಿದ್ದಾರೆ. ದೂರಿನ ಬಗ್ಗೆ ಜಿಲ್ಲಾ ಅಪರಾಧ ವಿಭಾಗದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೋಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries